ಮಂಡ್ಯ, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಅಂಬರೀಶ್ ಅವರ ಹೆಸರು ಹೇಳಿಕೊಂಡು ಯಾರೆಲ್ಲಾ ಏನೇನು ಮಾಡಿಕೊಂಡಿದ್ದಾರೆಂದು ಗೊತ್ತಿದೆ. ಈ ವಿಚಾರವನ್ನು ನಾನು ಇಲ್ಲಿ ಹೇಳೋಕೆ ಇಷ್ಟಪಡಲ್ಲ ಎನ್ನುವ ಮೂಲಕ ಸಚಿವ ತಮ್ಮಣ್ಣಗೆ ಸುಮಲತಾ ಅವರು ಟಾಂಗ್ ನೀಡಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಇದ್ದಾಗ ಯಾರು ನಮ್ಮ ಮನೆಗೆ ಬರುತ್ತಿದ್ದರು. ಯಾರ ಮನೆಗೆ ಹೋಗುತ್ತಿದ್ದೇವು. ನನಗೆ ಗೊತ್ತಿದೆ. ನಮ್ಮಲ್ಲಿ ತಪ್ಪಿದ್ದರೆ ನಮ್ಮನೆಗೆ ಬಂದು ಹೇಳಬಹುದಿತ್ತು. ಸಂಬಂಧಿಕರಾಗಿ ನಮ್ಮ ಮನೆಗೆ ಬಂದು ಹೇಳಬಹುದಿತ್ತು. ತಮ್ಮಣ್ಣ ಅಂಬಿಗೆ ಅಣ್ಣ ಆಗಬೇಕು ಅಂದರೆ ನಾನವರ ಸೊಸೆ ಅಲ್ವಾ ಎಂದು ಪ್ರಶ್ನಿಸಿದರು.
ಅತಿಥಿ ಸತ್ಕಾರ ಏನು ಅಂತ ಅಂಬಿ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಾಗಿಲ್ಲ. 24 ಗಂಟೆ ಅತಿಥಿ ಸತ್ಕಾರ ಮಾಡಿರೋರು ಅಂಬರೀಶ್ ಎಂದು ಸಚಿವ ತಮ್ಮಣ್ಣ ಮಾತಿಗೆ ಸುಮಲತಾ ಖಾರವಾಗಿಯೇ ಪ್ರತಿಕ್ರಿಯಿಸಿದರು.