ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮಹೇಂದ್ರನ್ ವಿಧಿವಶ

ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಮಹೇಂದ್ರನ್ ವಿಧಿವಶ

ತಮಿಳುನಾಡು, ಏ. 2, ನ್ಯೂಸ್ ಎಕ್ಸ್ ಪ್ರೆಸ್: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ 77 ವರ್ಷದ ಜೆ ಮಹೇಂದ್ರನ್ ಇಂದು ನಿಧನರಾಗಿದ್ದಾರೆ. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಮಹೇಂದ್ರನ್ ಮಾರ್ಚ್ 27 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ(ಏಪ್ರಿಲ್-1) ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಆದ್ರೆ, ಇಂದು 7 ಮಹೇಂದ್ರನ್ ವಿಧಿವಶರಾಗಿದ್ದಾರೆ.

ತಮಿಳಿನಲ್ಲಿ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಮಹೇಂದ್ರನ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಹೇಂದ್ರನ್ ಸೂಪರ್ ಸ್ಟಾರ್ ರಜನಿಕಾಂತ್ ಪಾಲಿಗಂತು ದೊಡ್ಡ ನಿರ್ದೇಶಕರೇ ಆಗಿದ್ದರು. ಯಾಕೆಂದರೆ, ಸೂಪರ್ ಸ್ಟಾರ್ ಹೆಸರು ಬರಲು ಮಹೇಂದ್ರನ್ ಅವರೇ ಕಾರಣ ಅಂತಾನು ಹೇಳಲಾಗುತ್ತೆ.

ಮಹೇಂದ್ರನ್ ನಿರ್ದೇಶನ ಮಾಡಿದ ಚಿತ್ರಗಳಲ್ಲಿ ಅತೀ ಹೆಚ್ಚು ರಜನಿಕಾಂತ್ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ‘ಮಲ್ಲುಮ್ ಮಲರುಮ್’, ‘ಜಾನಿ’, ‘ನಂಜಥೈ ಕಿಲ್ಲಾದಿ’ ಚಿತ್ರಗಳಂತಹ ಅದ್ಭುತ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಮಹೇಂದ್ರನ್ ಇತ್ತೀಚಿನ ದಿನಗಳಲ್ಲಿ ಅಭಿನಯ ಕೂಡ ಮಾಡಿ ಸೈ ಎನಿಸಿಕೊಂಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos