ತಮಿಳಿನಲ್ಲಿ ಮಾತನಾಡಿ ಮತ ಯಾಚಿಸಿದ ದರ್ಶನ್

ತಮಿಳಿನಲ್ಲಿ ಮಾತನಾಡಿ ಮತ ಯಾಚಿಸಿದ ದರ್ಶನ್

ಮಂಡ್ಯ, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯದ ನಗರದಲ್ಲಿ ಪ್ರಚಾರ ಮಾಡುತ್ತಿದ್ದ ದರ್ಶನ್, ತಮಿಳು ಜನ ಹೆಚ್ಚು ಪ್ರದೇಶದಲ್ಲಿ ತಮಿಳಿನಲ್ಲೇ ಮಾತನಾಡಿದ ಮತಯಾಚನೆ ಮಾಡಿದ್ದಾರೆ. ‘ಅಂಬರೀಶ್ ಅವರಿದ್ದಾಗ ನೀವು ಹೇಗೆ ಪ್ರೀತಿಯಿಂದ ಬರಮಾಡಿಕೊಂಡಿದ್ದರೋ ಅದೇ ರೀತಿ ಸುಮಲತಾ ಅವರಿಗೂ ನಿಮ್ಮ ಮತ ನೀಡಿ’ ಎಂದು ಕೇಳಿಕೊಂಡಿದ್ದಾರೆ. ಮಂಡ್ಯ ಪ್ರಚಾರದ ವೇಳೆ ಡೈಲಾಗ್ ಅರ್ಧಕ್ಕೆ ನಿಲ್ಲಿಸಿದ ದರ್ಶನ್, ಕಾರಣವೇನು? ದರ್ಶನ್ ತಮಿಳಿನಲ್ಲಿ ಮಾತನಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಟೀಕೆ ಮಾಡುತ್ತಿದ್ದಾರೆ. ಅಪಾರ ಅಭಿಮಾನಿಗಳನ್ನ ಹೊಂದಿರುವ ನಟ ದರ್ಶನ್, ವೋಟಿಗಾಗಿ ಈ ಮಟ್ಟಕ್ಕೆ ಇಳಿಯಬಾರದು, ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ. ಆದ್ರೆ, ಸ್ಥಳಿಯ ಜನರಿಗೆ ಅವರ ಭಾಷೆಯಲ್ಲಿ ಹೇಳಿದಾಗ ಬೇಗ ಅರ್ಥವಾಗುತ್ತೆ ಎಂಬ ಕಾರಣದಿಂದ ಅವರ ಭಾಷೆಯಲ್ಲಿ ಮಾತನಾಡುವ ಪ್ರಯತ್ನ ಮಾಡುತ್ತೇನೆ ಎಂದು ದರ್ಶನ್ ನಿನ್ನೆಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos