ಮಾಲೂರು:ಶಾಸಕರು ಕೇವಲ ಪ್ರಚಾರ ಮತ್ತು ವೈಯುಕ್ತಿಕ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದ್ದು, ತಾಲೂಕು ಆಡಳಿತದಲ್ಲಿ ಭ್ರಷ್ಟಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ಗೌಡ ಗಂಭೀರ ಆರೋಪ ಮಾಡಿದರು.
ಕೋಡಿಹಳ್ಳಿ ಗ್ರಾಮದ ತಮ್ಮ ನಿವಾಸದ ಬಳಿ ಕರೆದಿದ್ದ ಸಾವಿರಾರು ಬೆಂಬಲಿಗರು, ಅಭಿಮಾನಿಗಳು, ಕರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಾಲೂರು ತಾಲೂಕಿನಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದ ಸಮಯದಲ್ಲಿ ನಮ್ಮ ಸರ್ಕಾರ ಇಲ್ಲದಿದ್ದರು, ತಾಲೂಕಿನ ಅಭಿವೃದ್ಧಿಗೆ ಬೇಕಾದಷ್ಟು ಅನುದಾನ ತಂದು ರಸ್ತೆಗಳ ಅಭಿವೃದ್ದಿ ಪಡಿಸಿದ್ದೇನೆ. ನನ್ನ ಅಧಿಕಾರ ಅವಧಿಯಲ್ಲಿ ರಸ್ತೆಗಳಿಗೆ ಬಿಡುಗಡೆಯಾದ ಅನುದಾನದಲ್ಲಿ ಈಗಿನ ಶಾಸಕರು ಕೆಲವು ರಸ್ತೆಗಳನ್ನು ಅಭಿವೃದ್ದಿ ಪಡಿಸಿರುವುದು. ಸ್ಥಳೀಯ ಕೈಗಾರಿಕೆಗಳ ಮಾಲೀಕರ ಮನವೊಲಿಸಿ ಸಿ.ಎಸ್.ಆರ್.ಅನುದಾನ ತಂದು ಕ್ರೀಡಾಂಗಣ, ಶಾದಿಮಹಲ್, ಶುದ್ದ ಕುಡಿಯುವ ನೀರಿನ ಘಟಕಗಳು, ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದ ೧೦೮ ಎತ್ತರದ ರಾಜ ಗೋಪುರ ನಿರ್ಮಾಣ ಮಾಡುವುದರ ಹೊಂದಿಗೆ ಉತ್ತಮ ಆಡಳಿತ ನೀಡಲಾಗಿತ್ತು ಎಂದರು.