ತಲಾಖ್ ನೀಡಿದ ಪತಿ ಅಂದರ್

ತಲಾಖ್ ನೀಡಿದ ಪತಿ ಅಂದರ್

ಕುಂದಾಪುರ, ಸೆ. 10 : ಮದುವೆಯಾದ ಎರಡು ತಿಂಗಳಿಗೆ ತ್ರಿವಳಿ ತಲಾಖ್ ನೀಡಿರುವ ಕುರಿತು ಮೂಡುಗೋಪಾಡಿ ನಿವಾಸಿ ಅಲ್ಫಿಯಾ ಅಖ್ತರ್(29) ಎಂಬುವರು ಕುಂದಾಪುರ ಠಾಣೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಪತಿ ಹನೀಫ್ ಸಯ್ಯದ್(32) ಎಂಬಾತನನ್ನು ಬಂಧಿಸಲಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಹಾಗೂ ರಾಜ್ಯದ ಎರಡನೇ ಪ್ರಕರಣ ಇದಾಗಿದ್ದು, ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ ಹಾಗೂ ಸಿಬ್ಬಂದಿ ರಾತ್ರಿಯೇ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಹನೀಫ್ ಸಯ್ಯದ್ ತಂದೆ ಅಬ್ಬಾಸ್ ಸಯ್ಯದ್, ತಾಯಿ ಜೈತುನ್ ಹಾಗೂ ಸಹೋದರಿ ಆಯೇಷಾ ವಿರುದ್ಧವೂ ದೂರು ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos