‘ಟಗರಿಗೆ’ ಟಾಂಗ್

‘ಟಗರಿಗೆ’ ಟಾಂಗ್

ತುಮಕೂರು, ಸೆ. 9 : ಲಕ್ಷ್ಮಣ ಸವದಿ ಅವರಿಗೆ ಡಿಸಿಎಂ ಸ್ಥಾನ ಕೊಟ್ಟಿರುವುದನ್ನು ವಿರೋಧಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲು ತಾವು ಮಾಡಿದ ತಪ್ಪನ್ನು ಮೆಲುಕು ಹಾಕಲಿ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಸೌಧದಲ್ಲಿ ವೀಡಿಯೋ ನೋಡಿದ್ದು ನೈತಿಕ ತಪ್ಪು, ಆ ತಪ್ಪಿಗೆ ತಕ್ಕ ಶಾಸ್ತಿಯಾಗಿದೆ. ಅದು ದೇಶದ್ರೋಹ ಕೆಲಸವಲ್ಲ. ಸಿದ್ದರಾಮಯ್ಯರ ಇದನ್ನೇ ಇಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಪ್ರ ಕ್ರಿಯಿಸಿದರು. ಸಿದ್ದರಾಮಯ್ಯ ವಿಧಾನ ಸೌಧದ ಪ್ರಮುಖ ದ್ವಾರದ ಬಾಗಿಲನ್ನು ಕಾಲಿನಿಂದ ಒದ್ದಿದ್ರು. ಇದು ಪವಿತ್ರ ಸ್ಥಳಕ್ಕೆ ಮಾಡಿದ ಅಪಚಾರ ಅಲ್ಲವೇ ಎಂದು ಪ್ರಶ್ನಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos