ಬೆಳಗಾವಿ, ಮೇ. 22, ನ್ಯೂಸ್ ಎಕ್ಸ್ ಪ್ರೆಸ್: ಬೆಳಗಾವಿಯ ನ್ಯೂ ಗಾಂಧಿನಗರ ರೈಲು ಹಳಿಯ ಬಳಿ ತಾಯಿ – ಮಗನ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ನ್ಯೂ ಗಾಂಧಿನಗರ ಬಳಿ ಇರುವ ರೈಲು ಹಳಿ ಸಮೀಪ ರೇಣುಕಾ(35) ಲಕ್ಷ್ಮಣ(8) ಅವರ ಶವ ಪತ್ತೆಯಾಗಿವೆ. ರೇಣುಕಾ ಕಳೆದ 10 ವರ್ಷಗಳಿಂದ ಬೆಳಗಾವಿಯ ಮಾರುತಿನಗರದಲ್ಲಿ ತರಕಾರಿ ವ್ಯಾಪಾರ ಮಾಡಿ ವಾಸವಾಗಿದ್ದರು.
ಪತಿ ಯಲ್ಲಪ್ಪ ಕರಗುಪ್ಪಿಯೇ ಕೊಲೆಗೈದು ಶವಗಳನ್ನು ಎಸೆದಿದ್ದಾನೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮೃತರು ಹುಕ್ಕೇರಿ ತಾಲೂಕಿನ ಬೀರನೂರ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ಬೆಳಗಾವಿ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.