ನವದೆಹಲಿ, ನ. 13 : ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿರುವ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅನರ್ಹ ಶಾಸಕರಿಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ಕೊನೆಗೂ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ಆದೇಶ ಸ್ವಾಗತರ್ಹವಾಗಿದೆ ಎಂದು ಹೆಚ್.ವಿಶ್ವನಾಥ್ ಹೇಳಿದ್ದಾರೆ.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ.
ಸ್ಪೀಕರ್ ನಮ್ಮನ್ನು ಮೂರೂವರೆ ವರ್ಷ ರಾಜ್ಯ ರಾಜಕೀಯದಿಂದ ದೂರವಿಡುವ ಹುನ್ನಾರ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಇದನ್ನು ತಿರಸ್ಕರಿಸಿದೆ. ಸ್ಪೀಕರ್ ಅಸಂವಿಧಾನಿಕ ತೀರ್ಪನ್ನು ಖಂಡಿಸಿ ನ್ಯಾಯಾಲಯ ತಮಗೆ ನ್ಯಾಯ ನೀಡಿದೆ ಎಂದರು.