ಮಂಡ್ಯ, ಮೇ.15, ನ್ಯೂಸ್ ಎಕ್ಸ್ ಪ್ರೆಸ್: ಕಾಂಗ್ರೆಸ್ ನ ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಗೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಸವಾಲು ಹಾಕಿದ್ದಾರೆ. ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಆರ್ ಪೇಟೆ ಶಾಸಕ ನಾರಾಯಣ ಗೌಡ, ”ಗಂಡಸ್ಥನ ಇದ್ದರೇ ಸುಮಲತಾ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಒಪ್ಪಿಕೊಳ್ಳಲಿ” ಎಂದು ಶಾಸಕ ನಾರಾಯಣಗೌಡ, ಕೆ.ಬಿ ಚಂದ್ರಶೇಖರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ನಿಖಿಲ್ ಮತ್ತು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ನೇರವಾಗಿ ಕರೆದಿದ್ದರೆ, ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದೆ. ಅವರು ಕರೆಯದ ಕಾರಣ ನಾನು ಬರಲಿಲ್ಲ ಎಂದು ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ಹೇಳಿದ್ದರು.
‘ಸುಮಲತಾ ಪರ ಪಟಾಕಿ ಹೊಡೆಯೋದಕ್ಕೆ ದುಡ್ಡು ಕೊಡ್ತಾರೆ’
ಕೆ.ಬಿ ಚಂದ್ರಶೇಖರ್ ಹೇಳ್ತಿರೋದು ದೊಡ್ಡ ಸುಳ್ಳು. ಕೆಬಿ ಚಂದ್ರಶೇಖರ್ ಬಳಿ ಮಾತನಾಡಲು ಸ್ವತ: ಹೆಚ್ ಡಿ ರೇವಣ್ಣ ಅವರೇ ಬಂದಿದ್ರು. ಅವರು ಕುಮಾರಣ್ಣ ಅವರಿಗಿಂತ ಹಿರಿಯರು. ಅವರು ಬಂದು ನಿಖಿಲ್ ಪರ ಪ್ರಚಾರ ಮಾಡಲು ಕರೆದ್ರು. ಆದರೇ ಇವರಿಗೆ ನಿಖಿಲ್ ಪರವಾಗಿ ಪ್ರಚಾರ ಮಾಡಲು ಇಷ್ಟ ಇರಲಿಲ್ಲ. ಹೀಗಾಗಿ ನಿಖಿಲ್, ಕುಮಾರಸ್ವಾಮಿ ಬಂದು ಕರೆದಿದ್ರೇ ಬರ್ತಾ ಇದ್ದೆ ಎಂದು ವಿವಾದಾತ್ಮಕವಾದ ಹೇಳಿಕೆ ನೀಡುತ್ತಿದ್ದಾರೆ. ಮಾಜಿ ಶಾಸಕ ಕೆಬಿ ಚಂದ್ರಶೇಖರ್ ಸುಮಲತಾ ಪರ ಪ್ರಚಾರ ಮಾಡಿದ್ದು ಜಿಲ್ಲೆಯಲ್ಲಿ ಮಕ್ಕಳು ಸಮೇತರಾಗಿ ನೋಡಿದ್ದಾರೆ. ಸುಮಲತಾ ಭೇಟಿಕೊಡುವ ಹಳ್ಳಿಗಳಿಗೆ ಸುಮಲತಾ ಭೇಟಿಕೊಡುವ ಮೊದಲೇ ಅವರು ಬರ್ತಾ ಇದ್ದರು. ಪಟಾಕಿ ಹೊಡೆಸಲು ಹಣ ತಗೊಳ್ಳಿ ಎಂದು ಕೊಟ್ಟು ಬಂದಿದ್ದಾರೆ. ಹೀಗಿದ್ದೂ, ಸುಳ್ಳು ಹೇಳುವ ಬದಲು, ಧೈರ್ಯ ಇದ್ದರೇ ನೇರವಾಗಿ ಫೇಸ್ ಟು ಫೇಸ್ ಮಾತನಾಡಲಿ ನಾರಾಯಣಗೌಡ ಕಿಡಿಕಾರಿದ್ದಾರೆ.