ಮಂಡ್ಯ, ಏ. 2, ನ್ಯೂಸ್ ಎಕ್ಸ್ ಪ್ರೆಸ್: ಇಂದು ನಟ ಯಶ್ ಅವರು ಅಬ್ಬರದ ಪ್ರಚಾರ ಮಂಡ್ಯದಲ್ಲಿ ಕೈಗೊಂಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಪರ ಪ್ರಚಾರ ನಡೆಸಲಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಆಗಮಿಸಿರುವ ನಟ ಯಶ್, ಶ್ರೀರಂಗಪಟ್ಟಣ ತಾಲೂಕಿನ ಊರಮಾರಲ ಕಸಲಗೆರೆ ಗ್ರಾಮದಿಂದ ರೋಡ್ ಶೋ ಮೂಲಕ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಕಿಗಂದೂರು, ಬೇವಿನಹಳ್ಳಿ, ಕೊತ್ತತ್ತಿ, ಕಾಳೇನಹಳ್ಳಿ, ಸಿದ್ದಯ್ಯನ ಕೊಪ್ಪಲು, ಇಂಡವಾಳು, ತೂಬಿನಕೆರೆ, ಎಲೆಚಾಕನಹಳ್ಳಿ, ಯಲಿಯೂರು, ಸಿದ್ದಯ್ಯನ ಕೊಪ್ಪಲು ಸೇರಿ ಮಂಡ್ಯದ 24 ಹಳ್ಳಿಗಳಲ್ಲಿ ಯಶ್ ಪ್ರಚಾರ ನಡೆಸಲಿದ್ದಾರೆ.