ಸುಮಲತಾ ಅಂಬರೀಶ್​ಗೆ ಸಿಗಲಿಲ್ಲ ಬಯಸಿದ್ದ ಚಿಹ್ನೆ, ಫಿಕ್ಸ್​ ಆಗಿದೆ ಕೈಗಾಡಿ..!

ಸುಮಲತಾ ಅಂಬರೀಶ್​ಗೆ ಸಿಗಲಿಲ್ಲ ಬಯಸಿದ್ದ ಚಿಹ್ನೆ, ಫಿಕ್ಸ್​ ಆಗಿದೆ ಕೈಗಾಡಿ..!

ಮಂಡ್ಯ, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್​ಗೆ ಚುನಾವಣಾ ಆಯೋಗ ‘ಕೈಗಾಡಿ’ ಗುರುತಿನ ಚಿಹ್ನೆಯನ್ನ ನೀಡಿದೆ. ಸುಮಲತಾ ಅವರು ಬಯಸಿದ್ದ ಮೂರು ಚಿಹ್ನೆಗಳೂ ಬೇರೆಯವರ ಪಾಲಾಗಿವೆ. ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ, ಕಬ್ಬಿನ ಗದ್ದೆ ಮುಂದೆ ರೈತ ನಿಂತಿರುವ ಚಿಹ್ನೆಗಳನ್ನ ಸುಮಲತಾ ಕೇಳಿದ್ದರು.

ಆದ್ರೆ ಈ ಮೂರೂ ಚಿಹ್ನೆಗಳೂ ಬೇರೆಯವರ ಪಾಲಾಗಿವೆ. ಲಕ್ಕಿ ಡ್ರಾನಲ್ಲೂ ಈ ಚಿಹ್ನೆಗಳು ಸುಮತಲಾ ಅಂಬರೀಶ್​ಗೆ ದೊರೆಯಲಿಲ್ಲ. ಕೊನೆಗೆ ಸುಮಲತಾ ಅವರಿಗೆ ಕೈಗಾಡಿ ಚಿಹ್ನೆ ನೀಡಲಾಗಿದೆ. ಸುಮಲತಾ ಹೆಸರಿನ ಮೂವರು ಮಹಿಳೆಯರು ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರುನಾಡು ಪಕ್ಷದ ಎಚ್​.ಕೆ. ಕೃಷ್ಣ, ಪಕ್ಷೇತರ ಅಭ್ಯರ್ಥಿಗಳಾದ ಕೆ.ಉದಯಕುಮಾರ್​, ಎನ್​.ಪಿ. ಸುರೇಶ್​ ಮತ್ತು ಜಿ.ಬಿ. ನವೀನ್​ ಕುಮಾರ್​ ತಮ್ಮ ನಾಮಪತ್ರ ವಾಪಸ್​ ಪಡೆದಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos