ಮಂಡ್ಯ, ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ಗೆ ಚುನಾವಣಾ ಆಯೋಗ ‘ಕೈಗಾಡಿ’ ಗುರುತಿನ ಚಿಹ್ನೆಯನ್ನ ನೀಡಿದೆ. ಸುಮಲತಾ ಅವರು ಬಯಸಿದ್ದ ಮೂರು ಚಿಹ್ನೆಗಳೂ ಬೇರೆಯವರ ಪಾಲಾಗಿವೆ. ತೆಂಗಿನ ತೋಟ, ಕಹಳೆ ಊದುತ್ತಿರುವ ರೈತ, ಕಬ್ಬಿನ ಗದ್ದೆ ಮುಂದೆ ರೈತ ನಿಂತಿರುವ ಚಿಹ್ನೆಗಳನ್ನ ಸುಮಲತಾ ಕೇಳಿದ್ದರು.
ಆದ್ರೆ ಈ ಮೂರೂ ಚಿಹ್ನೆಗಳೂ ಬೇರೆಯವರ ಪಾಲಾಗಿವೆ. ಲಕ್ಕಿ ಡ್ರಾನಲ್ಲೂ ಈ ಚಿಹ್ನೆಗಳು ಸುಮತಲಾ ಅಂಬರೀಶ್ಗೆ ದೊರೆಯಲಿಲ್ಲ. ಕೊನೆಗೆ ಸುಮಲತಾ ಅವರಿಗೆ ಕೈಗಾಡಿ ಚಿಹ್ನೆ ನೀಡಲಾಗಿದೆ. ಸುಮಲತಾ ಹೆಸರಿನ ಮೂವರು ಮಹಿಳೆಯರು ಸೇರಿದಂತೆ ಒಟ್ಟು 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರುನಾಡು ಪಕ್ಷದ ಎಚ್.ಕೆ. ಕೃಷ್ಣ, ಪಕ್ಷೇತರ ಅಭ್ಯರ್ಥಿಗಳಾದ ಕೆ.ಉದಯಕುಮಾರ್, ಎನ್.ಪಿ. ಸುರೇಶ್ ಮತ್ತು ಜಿ.ಬಿ. ನವೀನ್ ಕುಮಾರ್ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.