ರಾಮದುರ್ಗ: ಖಾನಪೇಠದ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಶೇರುದಾರರಿಗೆ ರಿಯಾಯತಿ ದರದಲ್ಲಿ ಸಕ್ಕರೆ ವಿತರಣೆ ಮಾಡುವುದ್ದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು.೨೯ರ ವರೆಗೆ ೨೧ ದಿನಗಳವರೆಗೆ ಸಕ್ಕರೆ ವಿತರಣೆ ಮಾಡಲಾಗುತ್ತಿದ್ದು, ಸಾಮಾಜಿಕ ಅಂತರದೊAದಿಗೆ ಶೇರುದಾರರು ಸಕ್ಕರೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದರು.
ಪ್ರತಿ ಕೆ.ಜಿಗೆ ೨೦ರೂ. ರಂತೆ ಅ-ವರ್ಗದ ಷೇರುದಾರರಿಗೆ ೧೦೦ ಕೆ.ಜಿ ಹಾಗೂ ಡ-ವರ್ಗದ ಶೇರುದಾರರಿಗೆ ೫೦ ಕೆ.ಜಿ ಸಕ್ಕರೆ ವಿತರಿಸಲಾಗುತ್ತದೆ. ರವಿವಾರ ಹೊರತುಪಡಿಸಿ ಮುಂಜಾನೆ ೯ ರಿಂದ ರಿಂದ ಸಂಜೆ ೫ ಗಂಟೆಯವರೆಗೆ ಖಾನಪೇಠದ ಕಾರ್ಖಾನೆಯ ಆವರಣದಲ್ಲಿ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶೇರುದಾರರು ತಮ್ಮ ಷೇರ್ ಸರ್ಟಿಫೀಕೇಟ್ನ ಮೂಲ ಪ್ರತಿಯೊಂದಿಗೆ ಆಗಮಿಸಿ ಆಡಳಿತ ಮಂಡಳಿ ನಿಗಧಿಪಡಿಸಿದ ಹಣ ಪಾವತಿ ಮಾಡಿ ಸಕ್ಕರೆ ಪಡೆದುಕೊಳ್ಳಬೇಕು. ಸಕ್ಕರೆ ತೆಗೆದುಕೊಳ್ಳಲು ಬರುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕು. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಕ್ಕರೆ ಪಡೆದುಕೊಳ್ಳಬೇಕು ಎಂದು ಹೇಳಿದರು.