ಹಲ್ಲೆಗೆ ಸುದೀಪ್ ನಂಟು ತಂದಿದ್ದಕ್ಕೆ ಜಗ್ಗೇಶ್ ಗರಂ

ಹಲ್ಲೆಗೆ ಸುದೀಪ್ ನಂಟು ತಂದಿದ್ದಕ್ಕೆ ಜಗ್ಗೇಶ್ ಗರಂ

ಬೆಂಗಳೂರು, ಆ. 14: ಸ್ಯಾಂಡಲ್‌ವುಡ್ ನಟ, ತಮ್ಮ ಸಹೋದರ ಕೋಮಲ್ ಮೇಲೆ ಹಲ್ಲೆ ನಡೆದಿರುವುದಕ್ಕೆ ಕಿಚ್ಚ ಸುದೀಪ್ ನಂಟನ್ನು ತಂದಿರುವುದಕ್ಕೆ ನವರಸ ನಾಯಕ್ ಜಗ್ಗೇಶ್ ಗರಂ ಆಗಿದ್ದಾರೆ.

ಕೋಮಲ್ ಮೇಲೆ ಯಾರು, ಯಾಕಾಗಿ ಹಲ್ಲೆ ಮಾಡಿರಬಹುದು ಎಂಬ ಊಹಾಪೋಹಗಳು ಶುರುವಾಗಿವೆ. ಕೋಮಲ್ ಮೇಲೆ ನಟ ಸುದೀಪ್ ಹಲ್ಲೆ ನಡೆಸಿರಬಹುದೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಹರಿಬಿಡಲಾಗಿದೆ. ಇದು ಜಗ್ಗೇಶ್ ಗಮನಕ್ಕೆ ಬಂದಿದ್ದು, ಕಿಡಿಗೇಡಿಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ವೈಯಕ್ತಿಕ ಅಭಿಪ್ರಾಯಗಳನ್ನು ಹರಿಯಬಿಡಬೇಡಿ. ನನ್ನ ಕಲಾಬಂಧು ಸುದೀಪ್ ಹೆಸರು ಯಾರಾದರೂ ಈ ವಿಷಯದಲ್ಲಿ ತಂದರೆ ಕ್ಷಮೆಯಿರುವುದಿಲ್ಲ. ಸುದೀಪ್ ನನ್ನ ಒಡಹುಟ್ಟದವನಾದರೂ ನನ್ನ ಹೆಮ್ಮೆಯ ತಮ್ಮನಂತೆ. ಅವನು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಬರೆಯುವ ಆಸೆ ಇದ್ದರೆ ಉತ್ತಮ ಸಾಮಾಜಿಕ ವಿಷಯ ಬರೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಾಗಿತ್ತು ?

ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್‌ ನಲ್ಲಿ ಸೈಡ್ ಕೊಡುವ ವಿಚಾರದಲ್ಲಿ ನಟ ಕೋಮಲ್ ಹಾಗೂ ಅಪರಿಚಿತರ ನಡುವೆ ನೆನ್ನೆ ಸಂಜೆ ಮಾತಿನ ಚಕಮಕಿ ನಡೆದಿದ್ದು ಕೋಮಲ್ ಮೇಲೆ ಹಲ್ಲೆ ನಡೆಸಲಾಗಿತ್ತು. ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ವಿಜಿ ಎಂಬುವನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಸುದೀಪ್ ಕೆಂಪೇಗೌಡ ಸಿನಿಮಾ ಮಾಡಿದ್ದರು. ಕೆಂಪೇಗೌಡ -2 ನ್ನು ಅವರೇ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ನಿರ್ಮಾಪಕ ಶಂಕರ್ ಗೌಡ – ಸುದೀಪ್ ನಡುವಿನ ಮುನಿಸಿನಿಂದ ಅದು ಸಾಧ್ಯವಾಗಲಿಲ್ಲ. ಕೋಮಲ್ ಕೇಂಪೇಗೌಡ-2 ನ್ನು ಮಾಡಿದರು. ಇದೇ ಮುನಿಸಿನಿಂದ ಸುದೀಪ್, ಕೋಮಲ್ ಮೇಲೆ ಹಲ್ಲೆ ಮಾಡಿಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಮಾಡಲಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos