ಮಡಿಕೇರಿ, ಮಾ. 14: ನಮ್ಮ ದೇಶದಲ್ಲಿ ಎಂಥಾ ಕಾಲ ಬಂತಪ್ಪ ಕೊರೊನಾ ವೈರಸ್ನಿಂದ ದೇಶದಲ್ಲಿ ಇಲ್ಲಿಯವರೆಗೆ ಹಲವಾರು ಜನಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಮ್ಮ ಕರ್ನಾಟಕ ರಾಜ್ಯದಲ್ಲಿ ಕೊರಣ ಕೊರೊನಾ ವೈರಸ್ನಿಂದ 1 ಬಲಿಯಾಗಿದೆ. ಕೊರೊನಾದಿಂದ ರಕ್ಷಿಸಿಕೊಳ್ಳಲು ಎಲ್ಲರೂ ಮಾಸ್ಕನ್ನು ಹಾಕುತ್ತಾರೆ ಆದರೆ ಬಸ್ ಚಾಲಕರೊಬ್ಬರು ವೈರಸ್ನಿಂದ ದೂರವಿರಲು ಹೆಲ್ಮೆಟ್ ಧರಿಸಿ ಬಸ್ಸನ್ನು ಚಾಲನೆ ಮಾಡುತ್ತಿದ್ದಾರೆ.
ಹೌದು, ರಾಜ್ಯದಲ್ಲಿ ಕೊರೊನಾ ಭೀತಿ ತೀವ್ರವಾಗಿ ಕಾಡುತ್ತಿದ್ದು, ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ.
ಮಡಿಕೇರಿ ಘಟಕದ ಡ್ರೈವರ್ ಉಷಾಕುಮಾರ್ ಕೊರೊನಾ ಭೀತಿಯಿಂದ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ. ಕೊಡಗಿನಲ್ಲೂ ಕೊರೊನಾ ವೈರಸ್ ಸೋಂಕಿತ ಶಂಕಿತರು ಪತ್ತೆಯಾಗುತ್ತಿದ್ದಂತೆ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಹೀಗಾಗಿ ಚಾಲಕ ಉಷಾಕುಮಾರ್ ಮಾಸ್ಕ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಮಾಸ್ಕ್ ಸಿಗದ ಹಿನ್ನೆಲೆಯಲ್ಲಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡುತ್ತಿದ್ದಾರೆ.
ಮಡಿಕೇರಿಯಿಂದ ಕುಶಾಲನಗರ ಮಾರ್ಗದಲ್ಲಿ ಬಸ್ಸು ಓಡಿಸುವ ಇವರು, ಬಹುತೇಕ ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಗಳನ್ನು ಕೇಳಿದ್ದಾರೆ. ಆದರೆ ಎಲ್ಲೂ ಸಿಕ್ಕಿಲ್ಲ , ಈ ಹಿನ್ನೆಲೆ ಆತಂಕಗೊಂಡು ಹೆಲ್ಮೆಟ್ ಮೊರೆ ಹೋಗಿದ್ದಾರೆ ತಿಳಿದುಬಂದಿದೆ.