ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದರ್ಪ

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ದರ್ಪ

ಬೆಂಗಳೂರು, ಸೆ. 12: ಪೊಲೀಸ್ ಇಲಾಖೆಯೊಲೊಬ್ಬ ಯಮಕಿಂಕರ. ಇವನ ರೌದ್ರವತಾರ ನೋಡಿದ್ರೆ ಎಂತವರ ಎದೆ ಕೂಡ ಜಲ್ ಎನ್ನಿಸುತ್ತದೆ. ಹೌದು, ಪೊಲೀಸ್ ಠಾಣೆಯಲ್ಲಿ ಹಾಕಿ ಬ್ಯಾಟ್ ನಲ್ಲಿ ಆಡ್ ತ್ತಾನೆ ಮ್ಯಾಚ್. ಈ ಪಿಎಸ್ಐ ಆಟಕ್ಕೆ ಈದೊಂದೇ ಉದಾಹರಣೆ ಇಲ್ಲ. ವಿಚಾರಣೆಗೆ ಕರೆದು ಬಾಂಬೆ ಕಟ್ ಹಾಕಿ ತಲೆ ಕೆಳಕ್ಕೆ ಮಾಡಿ ಬಾರಿಸ್ತಾನೆ ಈ ಕಿರಾತಕ ಪಿಎಸ್ ಐ. ಈ ಪಿಎಸ್ ಐಗೆ ಮಾನವೀಯತೆ ಕೂಡ ಇಲ್ಲ ಕನಿಕರ ಮೊದಲೇ ಇಲ್ಲ.

ಸುಬ್ರಮಣ್ಯನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀಕಂಠೇಗೌಡ ಆರೋಪಿ ಒಬ್ಬನಿಗೆ ಕೈಕಾಲು ಕಟ್ಟಿ ಲಾಠಿ, ಹಾಕಿ ಬ್ಯಾಟ್ನಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ವ್ಯಕ್ತಿಯ ವಿರುದ್ಧ ಆರೋಪ ಕೇಳಿ ಬಂದ ತಕ್ಷಣ, ಸ್ವತಃ ಪೊಲೀಸರೇ ನ್ಯಾಯಾಧೀಶರಂತೆ ತೀರ್ಪು ನೀಡಿ, ಅಮಾನವೀಯವಾಗಿ ಟಾರ್ಚರ್ ನೀಡಿರುವ ಘಟನೆಗೆ ರಾಜ್ಯದೆಲ್ಲೆಡೆ ಖಂಡನೆ ವ್ಯಕ್ತವಾಗಿದೆ.

ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಯಶವಂತ ಎಂಬಾತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆತನಿಗೆ ಕಾಲಕಾಲಕ್ಕೆ ಪೊಲೀಸ್ ಠಾಣೆಗೆ ಬರುವಂತೆ ಸುಬ್ರಹ್ಮಣ್ಯ ನಗರ ಪೊಲೀಸರು ಸೂಚನೆ ನೀಡಿದ್ದರು. ಆದರೆ ಆ ಆರೋಪಿ  ಪೊಲೀಸ್ ಠಾಣೆಗೆ ಬರದೆ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ. ಯಶವಂತ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಲೇ ಇದ್ದರು ಎನ್ನಲಾಗಿದೆ.

ಆರೋಪಿ ಯಶವಂತ್ ಪಾರ್ಕಿಂಗ್ನಲ್ಲಿ ಕೆಲಸ ಮಾಡುವ ಯುವತಿಗೆ ದಿನನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗದೆ. ಇದೇ ಕಾರಣಕ್ಕೆ ಸುಬ್ರಹ್ಮಣ್ಯನಗರ ಪೊಲೀಸರು ಯುವತಿಗೆ ಚುಡಾಯಿಸ್ತಿದ್ದವನಿಗೆ ಹಿನ್ನಲೆ ಸಬ್ ಇನ್ಸಪೆಕ್ಟರ್ ಅಮಾನವೀಯವಾಗಿ ಆರೋಪಿಯ ಜತೆ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಆರೋಪ ಕೇಳಿ ಬಂದ ಮಾತ್ರಕ್ಕೆ, ಅಥವಾ ಮೇಲ್ನೋಟಕ್ಕೆ ಸಾಬೀತಾಗಿದ್ದರೂ ಸಹ ಪೊಲೀಸರಿಗೆ ಈ ರೀತಿಯಾಗಿ ವರ್ತಿಸುವ ಹಕ್ಕಿಲ್ಲ ಎಂಬುದನ್ನು ಇಲಾಖೆಗೆ ನೆನಪಿಸುವ ಮತ್ತೊಂದು ಘಟನೆ ಇದು ಎಂದರೆ ತಪ್ಪಾಗಲಾರದು.

 

ಫ್ರೆಶ್ ನ್ಯೂಸ್

Latest Posts

Featured Videos