ಕೈ ಹಿಡ್ಕೊಂಡು ಹಳ್ಳ ದಾಟಿದ ವಿದ್ಯಾರ್ಥಿಗಳು

ಕೈ ಹಿಡ್ಕೊಂಡು ಹಳ್ಳ ದಾಟಿದ ವಿದ್ಯಾರ್ಥಿಗಳು

ಧಾರವಾಡ, ಅ. 26 : ಇತ್ತೀಚಿಗೆ ಬಿದ್ದ ಬಾರೀ ಮಳೆ ಮುಂದುವರಿದ ಹಿನ್ನೆಲೆ ಹಳ್ಳ ಮತ್ತೆ ತುಂಬಿ ಹರಿಯುತ್ತಿದೆ. ಭಯದ ವಾತಾವರಣ ನಿರ್ಮಾಣವಾಗಿದೆ. ಧಾರವಾಡ ಜಿಲ್ಲೆ ವೀರಾಪುರ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿಗಳು ನಿತ್ಯ ಭಯಂಕರ ಹಳ್ಳವನ್ನು ದಾಟಬೇಕಿದೆ.
ಈ ಹಳ್ಳ ದಾಟಲು ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ಒಬ್ಬರ ಕೈ ಒಬ್ಬರು ಹಿಡಿದುಕೊಂಡು ವಿದ್ಯಾರ್ಥಿಗಳು ತುಂಬಿ ಹರಿಯುತ್ತಿರುವ ಹಳ್ಳವನ್ನು ದಾಟಿದ್ದಾರೆ. ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಪ್ರಾಣ ಪಣಕ್ಕಿಟ್ಟು ಶಾಲೆಗೆ ಹೋಗುತ್ತಿದ್ದಾರೆ. ಎರಡು ತಿಂಗಳ ಹಿಂದಷ್ಟೇ ಈ ಹಳ್ಳ ದಾಟಲು ಹೋಗಿದ್ದ ರೈತರೊಬ್ಬರು ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.
ಈಗ ಅದೇ ಹಳ್ಳ ದಾಟಲು ಹೈಸ್ಕೂಲ್ ವಿದ್ಯಾರ್ಥಿಗಳು ನಿತ್ಯ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದಾರೆ. 300 ವಿದ್ಯಾರ್ಥಿಗಳು ಹಳ್ಳ ದಾಟಿಯೇ ಶಾಲೆಗೆ ಹೋಗಿ ಬರಬೇಕು.

ಫ್ರೆಶ್ ನ್ಯೂಸ್

Latest Posts

Featured Videos