ಪರೀಕ್ಷೆ ಬರೆದು ಹಸೆಮಣೆ ಏರಿದ ವಧು..!

  • In Metro
  • May 7, 2019
  • 208 Views
ಪರೀಕ್ಷೆ ಬರೆದು ಹಸೆಮಣೆ ಏರಿದ ವಧು..!

ಮನಗೊಳಿ, ಮೇ. 07, ನ್ಸೂಸ್ ಏಕ್ಸ್ ಪ್ರಸ್: ವಿಜಯಪುರದ ಎಸ್.ಬಿ.ಕಲಾ ಕಾಲೇಜಿನ ಬಿಎ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಜಯಶ್ರೀ ರವರ ವಿವಾಹ ಮುಹರ್ತವು ತಮ್ಮ ಸೋದರ ಮಾವ ಶಿವಾನಂದ ದೂಳಪ್ಪ ಜೈನಾಪುರ ಜತೆ ಸೋಮವಾರ ನಿಶ್ವಯವಾಗಿತ್ತು. ಜಯಶ್ರೀಯ ಬಿಎ ಇಂಗ್ಲಿಷ್ ಐಚ್ಚಿಕ ವಿಷಯದ ಪರೀಕ್ಷೆಯೂ ಸೋಮವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಗಂಟೆವರೆಗೂ ನಿಗದಿಯಾಗಿತ್ತು. ಮದುವೆ-ಪರೀಕ್ಷೆಯ ದ್ವಂದ್ವದಲ್ಲಿ ಮೊದಲಿಗೆ ಪರೀಕ್ಷೆ ಆಯ್ಕೆ ಮಾಡಿಕೊಂಡ ಜಯಶ್ರೀ  ವಿಜಯಪುರಕ್ಕೆ ತೆರಳಿ, ಇಂಗ್ಲಿಷ್ ಐಚ್ಚಿಕ ವಿಷಯದ ಪರೀಕ್ಷೆ ಬರೆದು  ನಂತರ ತಮ್ಮೂರಿಗೆ ಮರಳಿ  ಅವರ  ಸೋದರ ಮಾವನ ಜತೆ, ಮತ್ತೊಂದು ಶುಭ ಮುಹೂರ್ತದಲ್ಲಿ ಸೋಮವಾರ ಮಧ್ಯಾಹ್ನ 1.45ಕ್ಕೆ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಹೊರ್ತದ ಸಮಯ ಬದಲಾದರೊ ಮದುವೆಗೆ ಅಗಮನಿಸಿದ ಬಂಧುಗಳು, ಹಾಗೊ ಮಿತ್ರರು ನವ ದಂಪತಿಗಳಿಗೆ ಶುಭ ಕೋರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos