ಪ್ರಬಲ ಜೆಡಿಎಸ್ ಟಿಕೆಟ್ ಆಕಾಂಕ್ಷಿ

ಪ್ರಬಲ ಜೆಡಿಎಸ್ ಟಿಕೆಟ್ ಆಕಾಂಕ್ಷಿ

ಶಿರಾ :ಕಳೆದ ೨.ವರ್ಷಗಳಿಂದ ವಿವಿಧ ಸಮುದಾಯಗಳ ಆರಾಧ್ಯ ದೈವಗಳು ನೆಲಸುವ ತಾಲೂಕಿನ ೭೮. ದೇವಸ್ಥಾನಗಳ ರಾಜ ಗೋಪುರ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕೆಲಸಗಳನ್ನು ನನ್ನ ಸ್ವಂತ ವೆಚ್ಚದಲ್ಲಿ ಮಾಡಿದ್ದು, ೨.೫ ಕೋಟಿ ರೂಪಾಯಿ ಹಣ ಈ ಸೇವೆಗೆ ವಿನಿಯೋಗಿಸಿದ್ದೇನೆ. ಅಲ್ಲದೇ ಕೊರೋನಾ ಸಂಕಷ್ಟದಲ್ಲಿ ೪೫. ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿ ಜನರ ಕಷ್ಟದಲ್ಲಿ ಭಾಗಿಯಾಗಿದ್ದು, ಜನರ ಪ್ರೀತಿ ವಿಶ್ವಾಸ ನನಗೆ ಶ್ರೀರಕ್ಷೆಯಾಗಿದ್ದು ಶಿರಾ ತಾಲೂಕನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಬಲಿಷ್ಠಗೊಳಿಸಿವ ಸದುದ್ದೇಶದೊಂದಿಗೆ ಈ ಭಾರಿ ಶಿರಾ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಲು ಪ್ರಬಲ ಆಕಾಂಕ್ಷೆ ಹೊಂದಿದ್ದು ಜೆಡಿಎಸ್ ವರಿಷ್ಠರ ಹಸಿರು ನಿಶಾನೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಸಮಾಜ ಸೇವಕ ಕಲ್ಕೆರೆ ರವಿಕುಮಾರ್ ಹೇಳಿದರು.
ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ಬೇವಿನಹಳ್ಳಿ ಗ್ರಾಮದಲ್ಲಿ ಕೊರೋನಾ ಸಂಕಷ್ಠದಲ್ಲಿರುವ ಕುಟುಂಬಗಳಿಗೆ ಸೋಮವಾರ ದಿನಸಿ ಪಧಾರ್ಥಗಳನ್ನು ವಿತರಣೆ ಮಾಡಿ ಮಾತನಾಡಿದರು.
೧೮.ವರ್ಷಗಳಿಂದ ಶಿರಾ ತಾಲೂಕಿನಲ್ಲಿ ಜನಸೇವೆಯಲ್ಲಿ ನಿರತನಾಗಿದ್ದು ಆರಂಭಿಕ ಹಂತದಲ್ಲಿ ಶೈಕ್ಷಣಿಕ ಆಭಿವೃದ್ದಿಗೆ ಹೆಚ್ಚು ಮಹತ್ವ ನೀಡಿ ಪ್ರತಿ ವರ್ಷ ಸಹಸ್ರಾರು ವಿಧ್ಯಾರ್ಥಿಗಳಿಗೆ ನೋಟ್ ಪುಸ್ತಕ ನೀಡುತ್ತಿರುವ ಸೇವೆ ನನಗೆ ಹೆಚ್ಚು ತೃಪ್ತಿ ನೀಡಿದೆ. ಶಿರಾ ಕ್ಷೇತ್ರದ ಜನಪ್ರಿಯ ಶಾಸಕ ದಿವಂಗತ ಬಿ.ಸತ್ಯನಾರಾಯಣರವರು ನನಗೆ ರಾಜಕೀಯ ಗುರುಗಳಾಗಿದ್ದು ಅಂತಹ ಸರಳ ಸಜ್ಜನಿಕೆಯ ರಾಜಕಾರಣಿಯ ಆದರ್ಶ ಶಿರಾ ಕ್ಷೇತ್ರದಲ್ಲಿ ಉಳಿಸುವ ನಿಟ್ಟಿನಲ್ಲಿ ಮುನ್ನಡೆಯ ಗುರಿಯೊಂದಿಗೆ ಜೆಡಿಎಸ್ ಮತ್ತಷ್ಟ ಬಲಗೊಳಿಸುವ ನಿಟ್ಟಿನಲ್ಲಿ ಸಂಘಟನೆಯಲ್ಲಿ ನಿರತನಾಗಿದ್ದು ಸಮಾಜ ಸೇವೆ ನಿರಂತರವಾಗಿ ಮಾಡುತ್ತಿದ್ದೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos