ಮುಷ್ಕರ ಕೈಬಿಟ್ಟ ಕಾರ್ಮಿಕರು

ಮುಷ್ಕರ ಕೈಬಿಟ್ಟ ಕಾರ್ಮಿಕರು

ಸಂಡೂರು: 12 ವರ್ಷಗಳಿಂದ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ ಗಣಿ ಕಾರ್ಮಿಕರನ್ನು ಏಕಾಏಕಿ ತೆಗೆದು ಹಾಕಿದ್ದು ಅವರನ್ನು ಮುಂದುವರೆಸುವಂತೆ 2ನೇ ದಿನವೂ ಮುಷ್ಕರವನ್ನು ನಡೆಸಿದ್ದು, ಇದಕ್ಕೆ ಸ್ಪಂದಿಸಿದ ಎನ್‍ಎಂಡಿಸಿ ಗಣಿ ಕಂಪನಿಯ ಜನರಲ್ ಮ್ಯಾನೇಜರ್ ಸಂಜೀವ್ ಸಾಹು ಮುಷ್ಕರ ಕೈ ಬಿಡಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎನ್ನುವ ಭರವಸೆಯನ್ನು ನೀಡುವ ಮೂಲಕ ಗಣಿ ಕಾರ್ಮಿಕರ ಮುಷ್ಕರವನ್ನು ಇಂದು ಹಿಂಪಡೆಯುತ್ತಿದ್ದೇವೆ ಎಂದು ಮುಖಂಡ ಜಿ.ಅಮರೇಶ್ ತಿಳಿಸಿದರು. ಮುಷ್ಕರವನ್ನು ಹಿಂಪಡೆಯುತ್ತಿದ್ದು, ಸೂಕ್ತ ವ್ಯವಸ್ಥೆ ಅಗದೇ ಇದ್ದಲ್ಲಿ ಮತ್ತೋಮ್ಮೆ ಮುಷ್ಕರ ಮಾಡುವ ಬಗ್ಗೆ ಚಿಂತನೆ ಮಾಡೋಣ, ಈಗ ನೀಡಿರುವ ಭರವಸೆಯ ಅಂಗವಾಗಿ ಮರು ನೇಮಕಕ್ಕೆ ಒತ್ತಾಯಿಸಿದ್ದು, ಕಾರ್ಯ ಶೀಘ್ರ ಅಗುವ ಭರವಸೆಯೊಂದಿಗೆ ಮುಕ್ತಾಯ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಎಂ. ಸತೀಶ್, ಎ.ಆನಂದ, ಗಂಗಪ್ಪ ಹೆಚ್.ಬಿ. ಪಂಪಾಪತಿ, ವಿಜಯಕುಮಾರ್, ಪರ್ವತಗೌಡ, ಜಂಬಪ್ಪ, ಹೊನ್ನೂರಪ್ಪ, ವಿ.ನಾಗರಾಜ, ಇನ್ನಿತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos