ಆಶ್ರಮದಿಂದ ಮಗುವನ್ನು ಕದ್ದ

ಆಶ್ರಮದಿಂದ ಮಗುವನ್ನು ಕದ್ದ

ಚಂಡೀಗಢ್ , ಡಿ. 09: ಮದುವೆಯಾಗಿ ಎರಡೂವರೆ ವರ್ಷವಾದರೂ ಮಕ್ಕಳಾಗಿಲ್ಲ ಎಂದು ವ್ಯಕ್ತಿಯೊಬ್ಬ ಆಶ್ರಮದಿಂದ ಮಗುವನ್ನು ಕದ್ದು ಅರೆಸ್ಟ್ ಆದ ಘಟನೆ ಹರಿಯಾಣದ ಕೈತಲ್ ಜಿಲ್ಲೆಯಲ್ಲಿ ನಡೆದಿದೆ.
ವಿಕಾಸ್ ಮಗುವನ್ನು ಕದ್ದು ಅರೆಸ್ಟ್ ಆದ ವ್ಯಕ್ತಿ. ಮದುವೆಯಾಗಿ ಎರಡೂವರೆ ವರ್ಷವಾದರೂ ದಂಪತಿಗೆ ಮಕ್ಕಳಾಗಿಲ್ಲ. ಈ ಕಾರಣಕ್ಕಾಗಿ ಪತಿ-ಪತ್ನಿ ಇಬ್ಬರು ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಆದರೆ ಮಗುವನ್ನು ದತ್ತು ಪಡೆಯುವುದಕ್ಕೆ ತುಂಬಾ ದೊಡ್ಡ ಪ್ರಕ್ರಿಯೆಗಳಿದ್ದ ಕಾರಣ ವಿಕಾಸ್ ಆಶ್ರಮದಿಂದ ಮಗುವನ್ನು ಕದ್ದಿದ್ದನು.
ಆಶ್ರಮದಿಂದ ವಿಕಾಸ್ ಮಗುವನ್ನು ಕದ್ದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗುವುದಕ್ಕೆ ಶುರುವಾಯಿತು. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಸಾರವಾಗುತ್ತಿದ್ದಂತೆ ವಿಕಾಸ್ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಹಿಂದಿರುಗಿಸಿದ್ದನು.

ಫ್ರೆಶ್ ನ್ಯೂಸ್

Latest Posts

Featured Videos