ತೆಕ್ಕಟ್ಟೆ, ನ. 30 : ಹೆಜ್ಜೇನು ಕಡಿದು ನಾಲ್ವರು ಅಸ್ವಸ್ಥರಾದ ಘಟನೆ ಕೆದೂರಿನಲ್ಲಿ ನಡದಿದೆ. ನೂಜಿಯ ವೆಂಕಟರಮಣ ಆಚಾರ್ಯ ಹಾಗೂ ಅವರ ಪತ್ನಿ ಸುಶೀಲಾ ಆಚಾರ್ಯ ಅವರು ತೆಕ್ಕಟ್ಟೆ ಕಡೆಗೆ ಬರುತ್ತಿದ್ದಾಗ ಹೆಜ್ಜೇನು ಗುಂಪಾಗಿ ಬಂದು ದಾಳಿ ಮಾಡಿದ್ದು ತೀವ್ರ ಸ್ವರೂಪದ ಪರಿಣಾಮ ಬೀರಿದೆ.
ಮಾಲಿನಿ ಶೆಟ್ಟಿ ಹಾಗೂ ರಂಜಿತ್ ಮೇಲೆ ಹೆಜ್ಜೇನು ದಾಳಿ ನಡೆಸಿದ್ದು ತಕ್ಷಣವೇ ತೆಕ್ಕಟ್ಟೆ ಯ ವೈದ್ಯ ಡಾ| ಎಂ.ಕುಸುಮಾಕರ ಶೆಟ್ಟಿ ಅವರು ಚಿಕಿತ್ಸೆ ನೀಡಿದ್ದಾರೆ.