ಬೆಂಗಳೂರು, ಆ.15 : ಬೆಂಗಳೂರಿನ ಮಾಣೀಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಬಿಎಸ್ ಯಡ್ಡಿಯೂರಪ್ಪ ಅವರು ಧ್ವಜಾರೋಹಣ ನೆರೆವೇರಿಸಿ ಮಾತನಾಡಿದರು. ಅರ್ಧ ರಾಜ್ಯ ಜಲ ಪ್ರಳಯಕ್ಕೆ ತುತ್ತಾಗಿದೆ. ಪ್ರವಾಹದಿಂದ 65 ಮಂದಿ ಮೃತ ಪಟ್ಟಿದ್ದಾರೆ. ಪ್ರವಾಹದಲ್ಲಿ ಮೃತ ಪಟ್ಟವರ ಕುಟುಂಬಗಳಿಗೆ ತಲಾ 5 ಲಕ್ಷದಂತೆ ಪರಿಹಾರ ನೀಡಲಾಗುತ್ತಿದೆ 6.97 ಕ್ಕೆ ಲಕ್ಷ ಜನರನ್ನು ಸುರಕ್ಷಿತ ಸ್ಥಳಾಂತರಿಸಲಾಗಿದೆ. 859 ಜಾನುವಾರುಗಳು ಸಾವನ್ನಪ್ಪಿವೆ. ಸಂತ್ರಸ್ತರಿಗೆ ನೆರವಿಗೆ 10 ಸಾವಿರ, ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಹಾಗೂ ಮನೆ ದುರಸ್ತಿ ಮಾಡಿಕೊಳ್ಳಲು 1 ಲಕ್ಷ ನೆರವು ನೀಡಲಾಗುವುದು ಎಂದು ಸಲಹೆ ನೀಡಿದರು.
ಇತ್ತೀಚಿಗೆ ರಾಜ್ಯದಲ್ಲಿ ಉದ್ಯೋಗಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಕಡಿಮೆ. ರಾಜ್ಯದಲ್ಲಿ ಉದ್ಯೋಗಗಳಲ್ಲಿ ಅಧಿಕಾಂಶ ಕನ್ನಡಿಗರಿಗೆ ದೊರೆಯಬೇಕು. ಇದು ಬಿಜೆಪಿ ಆಶಯ. ಕೇಂದ್ರ ಸರ್ಕಾರ ಕಾಶ್ಮೀರವನ್ನು ಕಪ್ಪಿಮುಷ್ಠಿಯಿಂದ ಬಿಡುಗಡೆ ಗೊಳಿಸಿದೆ. ಸಂವಿಧಾನ 370 ನೇ ವಿಧಿ ಸೇರ್ಪಡೆಗೆ ಸ್ವಯಂ: ಡಾ. ಆರ್. ಅಂಬೇಡ್ಕರ್ ಅವರೇ ವಿರೋಧ ವ್ಯಕ್ತಪಡಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ದಿಟ್ಟ ನಿರ್ಧಾರ ರಾಷ್ಟ್ರ ಹಾಗೂ ಸ್ವಾಗತಿಸಿದೆ. ಇದು ಚರಿತ್ರಾರ್ಹ ನಿರ್ಧಾರ ಭಾರತೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ದಾಖಲಾಗಿದೆ ಎಂದರು.