ಕೊಲಂಬೊ, ಏ. 25, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾ ದೇಶದಲ್ಲಿ ಭಾನುವಾರ ಸರಣಿ ಬಾಂಬ್ ಸ್ಪೋಟ ನಡೆದಿತ್ತು. ಈ ಸ್ಪೋಟದಲ್ಲಿ ಕರ್ನಾಟಕದ 7 ಮಂದಿ ಕನ್ನಡಿಗರು ಸಾವನ್ನಪ್ಪಿದರು.ಶಾಂಗ್ರಿಲಾ ಹೋಟೆಲ್ ನಲ್ಲಿಯೂ ಸಹ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಹೋಟೆಲ್ ಗೆ ಪ್ರವೇಶಿಸಿದ ಆತ್ಮಾಹುತಿ ಬಾಂಬರ್ಸ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕರ್ನಾಟಕ ಮೂಲದ ಹನುಮಂತಪ್ಪ ಹಾಗೂ ಸ್ನೇಹಿತರು ಅದೇ ಹೋಟೆಲ್ ನ ಕೊಠಡಿಯೊಂದರಲ್ಲಿ ತಂಗಿದ್ದರು. ಈ ವೇಳೆ ಶಂಕಿತ ಉಗ್ರರಿಬ್ಬರು ಹೋಟೆಲ್ ಒಳಗೆ ಪ್ರವೇಶಿಸಿದ ವೀಡಿಯೋ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. 13ನೇ ಕೊಠಡಿ ಲಿಫ್ಟ್ನಲ್ಲಿ ಆತ್ಮಾಹುತಿ ಬಾಂಬರ್ಸ್ ಕಾಣಿಸಿಕೊಂಡಿದ್ದು, ಬೆನ್ನ ಮೇಲೆ ಬ್ಯಾಗ್ ಒಂದನ್ನು ಏರಿಸಿಕೊಂಡು, ತಲೆ ಮೇಲೆ ಟೋಪಿ ಧರಿಸಿ ಹೋಟೆಲ್ ಒಳ ಪ್ರವೇಶಿಸಿದರು.
ಆ ಉಗ್ರ ಪಾಪಿಗಳು ಹೋಟೆಲ್ ಒಳಗೆ ಬಂದ ಕೆಲವೇ ಸೆಕೆಂಡುಗಳಲ್ಲಿ ಹೋಟೆಲ್ ನಲ್ಲಿ ಬಾಂಬ್ ಸ್ಪೋಟಗೊಂಡಿದೆ. ಎಂದು ವಿಡಿಯೋ ಹಾಗೂ ಹಲವು ಮಾಹಿತಿಗಳ ಮೂಲಕ ತಿಳಿದು ಬಂದಿದೆ. ಹಾಗೂ ಕತುವಾಪಿಟಿಯಾ ಚರ್ಚ್ ಬಳಿಯೂ ಕೂಡ ಇದೇ ರೀತಿಯಲ್ಲಿ ವ್ಯಕ್ತಿಯೊಬ್ಬನು ಚರ್ಚ್ನಲ್ಲಿ ಪ್ರಾರ್ಥನೆ ನಡೆಯುವ ಸಮಯಕ್ಕೆ ಸರಿಯಾಗಿ ಒಂದು ಬ್ಯಾಗ್ ಧರಿಸಿಕೊಂಡು ಚರ್ಚ್ಗೆ ಪ್ರವೇಶಿಸಿ ಬಾಂಬ್ ಸ್ಪೋಟಿಸಿದ್ದನು.ಕತುವಾಪಿಟಿಯಾ ಚರ್ಚ್ಗೆ ಬಂದ ವ್ಯಕ್ತಿಯ ಬ್ಯಾಗಿಗೂ ಹಾಗೂ ಶಾಂಗ್ರಿಲಾ ಹೋಟೆನಲ್ಲಿ ಗೋಚರಿಸಿದ ವ್ಯಕ್ತಿಯ ಬ್ಯಾಗ್ಗೂ ಸಾಮ್ಯತೆ ಇದ್ದು, ಬ್ಯಾಗ್ಗಳು ಬಹುತೇಕ ಒಂದೇ ರೀತಿಯಲ್ಲಿದೆ. ಶ್ರೀಲಂಕಾದ ಕೊಲಂಬೋ ಸರಣಿ ಸ್ಫೋಟ ಇದುವರೆಗೂ 400 ಅಮಾಯಕ ಜನರ ಬಲಿಯನ್ನು ಪಡೆದು ಕೊಂಡಿದೆ.