ನಟ ಶ್ರೀಮುರಳಿ ಆಸ್ಪತ್ರೆಗೆ ದಾಖಲು!

ನಟ ಶ್ರೀಮುರಳಿ ಆಸ್ಪತ್ರೆಗೆ ದಾಖಲು!

ಮೈಸೂರು: ನಮ್ಮ ಸ್ಯಾಂಡಲ್ ವುಡ್ನ ಸ್ಟಾರ್‌ ನಟರಲ್ಲಿ ನಟ ಶ್ರೀ ಮುರುಳಿ ಕೂಡ ಒಬ್ಬರು, ನಟ ಶ್ರೀ ಮುರಳಿ ಧಿಡೀರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅವಘಡದಿಂದ ನಟ ಶ್ರೀ ಮುರಳಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಮೈಸೂರಿನಲ್ಲಿ ಬಘೀರ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಶೂಟಿಂಗ್‌ ವೇಳೆ ಎಡಗಾಲಿನ ಹಿಮ್ಮಡಿಗೆ ತೀವ್ರ ತರಹದ ಪೆಟ್ಟಾಗಿದ್ದು. ಸಾಹಸ ಸನ್ನಿವೇಶದ ಶೂಟಿಂಗ್‌ ವೇಳೆ ಈ ಅವಗಢ ಸಂಭವಿಸಿದೆ. ನಿಲ್ಲಲೂ ಬಾರದ ಸ್ಥಿತಿಗೆ ಜಾರಿದ್ದ ಅವರನ್ನು ತಕ್ಷಣ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಬಘೀರ ಸಿನಿಮಾ ಚಿತ್ರೀಕರಣವನ್ನು ಮತ್ತೆ ಮುಂದೂಡಲಾಗಿದ್ದು, ಅನೇಕ ವರ್ಷಗಳ ಬಳಿಕ ಶ್ರೀ ಮುರಳಿ ಅವರನ್ನು ಮತ್ತೆ ತೆರೆ ಮೇಲೆ ಕಾಣಲು ಕಾತುರರಾರಿದ್ದ ಅಭಿಮಾನಿಗಳಿಗೆ ಬೇಸರವಾಗಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos