ಶ್ರೀಗಂಧ ಮರಗಳ್ಳರ ಬಂಧನ

ಶ್ರೀಗಂಧ ಮರಗಳ್ಳರ ಬಂಧನ

ಹಾನಗಲ್, ಜೂ. 27 ​: ಶ್ರೀಗಂಧದ ಕಟ್ಟಿಗೆಯ ಮೌಲ್ಯ ಸುಮಾರು 1.50 ಲಕ್ಷ ರೂ. ಮರ ಕಡಿದು ಮಾರಾಟ ಮಾಡುತ್ತಿದ್ದ ಕಳ್ಳರನ್ನು ಕಳ್ಳರನ್ನು ಹಾನಗಲ್ಲ ಪೊಲೀಸರು  ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಅರಣ್ಯ ಪ್ರದೇಶದಿಂದ ಶ್ರೀಗಂಧದ ಮರ ಕಡಿದು ಮಾರಾಟ ಮಾಡುತ್ತಿದ್ದ ತಾಲೂಕಿನ ಹಿರೂರ ಗ್ರಾಮದ ಸಿಕಂದರ ಅಬ್ದುಲ್​ಖಾದರ ಆಲೂರ (30),ಹಿರೇಕೆರೂರ ತಾಲೂಕಿನ ಚಿಕ್ಕೇರೂರ ಗ್ರಾಮದ ಖಲೀಮುಲ್ಲಾ ಗನಿಸಾಬ ಬುಗಳಿ(36) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಹಾನಗಲ್ಲ ಠಾಣೆ ಪೊಲೀಸರು ಹಿರೂರ ಗ್ರಾಮದ ಸಿಕಂದರ ಅಬ್ದುಲ್​ಖಾದರ ಆಲೂರ ಮನೆ ಮೇಲೆ ದಾಳಿ ನಡೆಸಿದಾಗ ಇಬ್ಬರು ಬಲೆಗೆ ಬಿದ್ದಿದ್ದಾರೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. 10 ಕೆಜಿ ಶ್ರೀಗಂಧದ ಕಟ್ಟಿಗೆ ಸಹಿತ ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ..  ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos