ಬೆಂಗಳೂರು: ಸಿದ್ದಗಂಗಾ ಮಠದ
ಶ್ರೀ ಡಾ. ಶಿವಕುಮಾರ ಶ್ರೀಗಳು ಇಂದು ಶಿವೈಕ್ಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಶ್ರೀಗಳ
ಅಂತಿಮ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಬಸ್
ವ್ಯವಸ್ಥೆಯನ್ನು ಮಾಡಲಾಗಿದ್ದು, ಇದೀಗ ರೈಲು ವ್ಯವಸ್ಥೆ ಸಹ ಮಾಡಲಾಗಿದೆ.
ನಾಳೆ ಬೆಂಗಳೂರಿನ ಯಶವಂತಪುರದಿಂದ ತುಮಕೂರಿಗೆ 4 ವಿಶೇಷ ರೈಲುಗಳು ಸಂಚರಿಸಲು ವ್ಯವಸ್ಥೆ
ಮಾಡಲಾಗಿದೆ. ನಾಳೆ ಬೆಳಿಗ್ಗೆ 8, 9, 10:30 ಮತ್ತು 12 ಗಂಟೆಗೆ ಯಶವಂತಪುರದಿಂದ ತುಮಕೂರಿಗೆ
ವಿಶೇಷ ರೈಲು ಸಂಚಾರಕ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಗೂ ಹುಬ್ಬಳ್ಳಿಯಿಂದಲೂ ತುಮಕೂರಿಗೆ ಎರಡು ವಿಶೇಷ
ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ಇಂದು ರಾತ್ರಿ ಮತ್ತು ನಾಳೆ ಬೆಳಗ್ಗೆ ಎರಡು ವಿಶೇಷ ರೈಲುಗಳು
ಸಂಚರಿಸಲಿವೆ.