“ಉದ್ದೇಶಪೂರ್ವಕವಾಗಿ ದೋಸ್ತಿ ಮುಖಂಡರ ಮನೆ ಮೇಲೆ ಐಟಿ ದಾಳಿ”

“ಉದ್ದೇಶಪೂರ್ವಕವಾಗಿ ದೋಸ್ತಿ ಮುಖಂಡರ ಮನೆ ಮೇಲೆ ಐಟಿ ದಾಳಿ”

ಬೆಂಗಳೂರು, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಬೆಂ. ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹೊರವಲಯದಲ್ಲಿರುವ ಗಟ್ಟಿಗನಬ್ಬೆ ಗೇಟ್​ನ ಸಮೀಪವಿರುವ ಕುಮಾರಸ್ವಾಮಿ ಆಪ್ತನ ಮನೆ ಮೇಲೆ ಸುಮಾರು ಹದಿನೆಂಟು ಜನ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ. ಶ್ರೀಧರ್​​​​ ಅವರು ಕುಮಾರಸ್ವಾಮಿ ಆಪ್ತರು ಮತ್ತು ಹೊಸಕೋಟೆ ತಾಲೂಕು ಜೆಡಿಎಸ್ ಅಧ್ಯಕ್ಷರು. ಆದ್ದರಿಂದ ಬಿಜೆಪಿಯವರು ರಾಜಕೀಯ ಪ್ರೇರಿತವಾಗಿ ದಾಳಿ ಮಾಡಿಸಿದ್ದಾರೆಂದು ಶ್ರೀಧರ್ ಆರೋಪಿಸಿದ್ದಾರೆ. ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮನೆಗಳ ಮೇಲೆ ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಚುನಾವಣಾ ಸಮಯದಲ್ಲಿ ಬಿಜೆಪಿಯವರು ಕಾಂಗ್ರೆಸ್‌, ಜೆಡಿಎಸ್ ನಾಯಕರ ಮನೆಯ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ. ನಾನು ಕಷ್ಟ ಪಟ್ಟು ಇಪ್ಪತ್ತು ವರ್ಷಗಳ ಕಾಲ ದುಡಿದು ಆಸ್ತಿ ಮಾಡಿದ್ದು, ಯಾವುದೇ ಬೇನಾಮಿ ಆಸ್ತಿ ಪಾಸ್ತಿ ಮಾಡಿಲ್ಲ. ನಾನು ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos