ಸನ್ಮಾನಿಸಲು ಬಂದ ಅಭಿಮಾನಿ ದೇವರುಗಳನ್ನೇ ಸತ್ಕರಿಸಿದ ಶ್ರೀಮುರಳಿ!

ಸನ್ಮಾನಿಸಲು ಬಂದ ಅಭಿಮಾನಿ ದೇವರುಗಳನ್ನೇ ಸತ್ಕರಿಸಿದ ಶ್ರೀಮುರಳಿ!

ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಡಾ. ರಾಜ್​​​ಕುಮಾರ್​​​​​ ಹೇಳುತ್ತಿದ್ದ ಅಭಿಮಾನಿ ದೇವರುಗಳು ಎಂಬ ಮಾತನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ನಿಜವಾಗಿಸಿದ್ಧಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಸನ್ಮಾನ ಮಾಡಿ ಶ್ರೀಮುರಳಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ಸ್ಟಾರ್ ನಟನಿಗೂ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಕೂಡಾ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಡಾ. ರಾಜ್​​ಕುಮಾರ್ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರು. ಈ ಮಾತನ್ನು ಪಾಲಿಸುತ್ತಿರುವ ರೋರಿಂಗ್ ಸ್ಟಾರ್, ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಸನ್ಮಾನ ಮಾಡಿದ್ದಾರೆ. ಹೌದು, ಶ್ರಿಮುರಳಿ ಸದ್ಯಕ್ಕೆ ‘ಭರಾಟೆ’ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಮುರಳಿಯನ್ನು ನೋಡಲು ಅವರ ಅಭಿಮಾನಿಗಳು ಶಾಲು, ಪೇಟದೊಂದಿಗೆ ಬಂದಿದ್ದಾರೆ. ಆದರೆ ನೀವು ತಂದಿರುವ ಉಡುಗೊರೆ ನನಗಲ್ಲ, ನಿಮಗೇ ಸೇರಬೇಕು ಎಂದ ಮುರಳಿ, ಆ ಶಾಲು ಹಾಗೂ ಪೇಟವನ್ನು ತಮ್ಮ ಅಭಿಮಾನಿಗಳಿಗೆ ಹೊದಿಸಿ ಅವರನ್ನು ಸನ್ಮಾನ ಮಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಮುರಳಿಯ ಈ ಸರಳತೆಯನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ಸುಳ್ಳಲ್ಲ.

ಫ್ರೆಶ್ ನ್ಯೂಸ್

Latest Posts

Featured Videos