ನವದೆಹಲಿ, ಮೇ. 29, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ನಿತಿನ್ ಗಡ್ಕರಿ, ಹರ್ಷವರ್ಧನ್, ಅರ್ಜುನ್ ಮೇಘವಾಲ್ ಹೀಗೆ ಬಹಳಷ್ಟುಹೆಸರುಗಳು ಓಡಾಡಿದರೂ ಕೊನೆಗೆ ಬಹುತೇಕ ಉತ್ತರ ಪ್ರದೇಶದ ಅತಿ ಹಿಂದುಳಿದ ವರ್ಗದ 7 ಬಾರಿ ಸಂಸದರಾದ ಸಂತೋಷ ಗಂಗ್ವಾರ್ ಹೆಸರು ಬಹುತೇಕ ಫೈನಲ್ ಆಗಿದೆ. ಹೊಸ ಸಂಸದರಿಗೆ ಪ್ರಮಾಣವಚನ ಬೋಧಿಸುವ ಹಂಗಾಮಿ ಸ್ಪೀಕರ್ ಆಗಿ ಗಂಗ್ವಾರ್ ಇರಲಿದ್ದು, ಬಹುತೇಕ ಅವರೇ ಮುಂದುವರೆಯಲಿದ್ದಾರಂತೆ.
ದೇಶದಲ್ಲೆಡೆ ಪುಲ್ವಾಮ ನಂತರ ಯುದ್ಧದ ವಾತಾವರಣ ಇದ್ದಾಗ ಚಿದಂಬರಂ ಸೇನೆಯ ವಿಶೇಷ ಅಧಿಕಾರವನ್ನು ಕಸಿದುಕೊಳ್ಳುವ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದು ದೊಡ್ಡ ಹಿನ್ನಡೆ ಆಗಲು ಕಾರಣ ಎಂದು ಕಾಂಗ್ರೆಸ್ ಸಭೆಯಲ್ಲಿ ಪ್ರಸ್ತಾಪವಾಯಿತು.