ಮಂಡ್ಯ, ಮಾ. 21, ನ್ಯೂಸ್ ಎಕ್ಸ್ ಪ್ರೆಸ್: ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಾಗರಹಾವುವೊಂದು ರಸ್ತೆಯಲ್ಲೇ 13 ಮೊಟ್ಟೆಯಿಟ್ಟ ಘಟನೆ ಇಂದು ನಡೆದಿದೆ.
ಪಟ್ಟಣದ ಶಿಕ್ಷಕರ ಬಡಾವಣೆಯ ರವಿ ಎಂಬುವವರ ಮನೆಯ ಆವರಣದಲ್ಲಿ ಹಾವು ಸೇರಿಕೊಂಡಿತ್ತು. ರವಿ ಅವರ ಮಾಹಿತಿ ಮೇರೆಗೆ ಉರಗ ತಜ್ಞ ಮನ. ಪ್ರಸನ್ನಕುಮಾರ್ ಸ್ಥಳಕ್ಕೆ ಆಗಮಿಸಿ, ಹಾವು ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಹಾವು ಮೊಟ್ಟೆಯಿಡಲು ಶುರು ಮಾಡಿದ್ದು, ಒಟ್ಟು 13 ಮೊಟ್ಟೆಗಳನ್ನು ನಾಗರಹಾವು ಇಟ್ಟಿದೆ. ಉಗರತಜ್ಞ ಮೊದಲಿಗೆ ಹಾವನ್ನು ರಕ್ಷಿಸಿ ಬೇರೆಡೆ ಬಿಟ್ಟಿದ್ದಾರೆ. ನಂತರ ಮೊಟ್ಟೆಗಳನ್ನೂ ರಕ್ಷಣೆ ಮಾಡಿದ್ದಾರೆ.