ಬೆಂಗಳೂರು, ಜು. 30 : ಸಿದ್ಧಾರ್ಥ್ ಅವರ ಇತ್ತೀಚಿನ ವ್ಯವಹಾರ,ಉದ್ಯಮದಲ್ಲಿ ಸಾವಿರಾರು ಕೋಟಿ ನಷ್ಟ ಉಂಟಾಗಿದೆ ಎನ್ನಲಾಗಿದೆ. ಕಾಫಿ ಡೇ ನಿರ್ದೇಶಕ ಸಿದ್ಧಾರ್ಥ ಪತ್ರ ಬರೆದಿದ್ದು, 37 ವರ್ಷಗಳ ಕಂಪನಿ ಬೆಳೆಸಲು ಬದ್ಧತೆಯಿಂದ ಕೆಲಸ ಮಾಡಿದ್ದೇನೆ. 6 ತಿಂಗಳ ಹಿಂದಷ್ಟೇ ಅಧಿಕ ಪ್ರಮಾಣದ ಸಾಲ ಪಡೆದಿದ್ದೇನೆ. ಸ್ನೇಹಿತರೊಬ್ಬರ ಬಳಿ ದೊಡ್ಡಮಟ್ಟದ ಸಾಲ ಮಾಡಿದ್ದೇನೆ. ಇತರ ಸಾಲಗಾರರ ಒತ್ತಡದಿಂದ ನನಗೆ ಈ ಪರಿಸ್ಥಿತಿ ಬಂದಿದೆ. ಲಾಭದಾಯಕ ಯಶಸ್ವಿ ಉದ್ಯಮಿಯಾಗಲು ನನ್ನಿಂದ ಸಾಧ್ಯವಾಗಲಿಲ್ಲ. ನನ್ನ ಷೇರುಗಳನ್ನು ಹಿಂಪಡೆಯುವಂತೆ ನನ್ನ ಮೇಲೆ ಒತ್ತಡವಿದೆ. ಈಗ ಎಲ್ಲವನ್ನೂ ಕೈಚೆಲ್ಲಲು ನಿರ್ಧಾರ ಮಾಡಿದ್ದೇನೆ. ಹಿಂದಿನ ಆದಾಯ ತೆರಿಗೆ ಇಲಾಖೆ ಡಿಜಿ ತುಂಬಾ ಕಿರುಕುಳ ಅನುಭವಿಸುತ್ತಿದ್ದೇನೆ. ನನ್ನ ಎಲ್ಲ ನಿರ್ಧಾರಗಳಿಗೆ ನಾನೇ ನೇರ ಕಾರಣ. ಈ ಎಲ್ಲ ವಿಷಯಗಳನ್ನು ನನ್ನ ಕುಟುಂಬಸ್ಥರಿಂದಲೂ ಮುಚ್ಚಿಟ್ಟಿದ್ದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಪೊಲೀಸರಿಗೆ ತಲೆನೋವು
ಎಸ್.ಎಂ.ಕೆ ಕುಟುಂಬ ತುಟಿ ಬಿಚ್ಚಿಲ್ಲ. ಅವರ ಈ ಮೌನ ಪೊಲೀಸರಿಗೆ ತಲೆ ನೋವಾಗಿದೆ. ಮಾಜಿ ವಿದೇಶಾಂಗ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅಳಿಯ ವಿ. ಜಿ. ಸಿದ್ಧಾರ್ಥ ಸೋಮವಾರ ಸಂಜೆ ದಿಢೀರ್ ನಾಪತ್ತೆಯಾಗಿದ್ದರು. ಹಲವಾರು ಊಹಾಪೋಹಗಳು ಕೇಳಿ ಬಂದಿದ್ದವಾದರೂ ಸದ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸಾಲದ ಸುಳಿವಿಗೆ ಸಿಕ್ಕಿಕೊಂಡ ಸಿದ್ದಾರ್ಥ ಒತ್ತಡಕ್ಕೊಳಗಾಗಿರುವುದು ಪತ್ರದಲ್ಲಿ ಸ್ಪಷ್ಟವಾಗಿದೆ ಎನ್ನಲಾಗಿದೆ.