ಚಿತ್ರದುರ್ಗ, ಅ. 14 : ಮೊಳಕಾಲ್ಮೂರು ಬಳಿ ಜಮೀನೊಂದರಲ್ಲಿ ತಂತಿ ಬೇಲಿಗೆ ಸಿಲುಕಿ ಕರಡಿಯೊಂದು ಪರದಾಡುತ್ತಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಟಣ ಹೊರವಲಯದ ರಾಯದುರ್ಗ ರಸ್ತೆಯ ಜಮೀನಿನಲ್ಲಿ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ತಂತಿ ಬೇಲಿ ದಾಟಲು ಹೋಗಿದ್ದ ವೇಳೆ ಜಮೀನಿನ ರಕ್ಷಣೆಗೆ ಹಾಕಿದ್ದ ತಂತಿಬೇಲಿಯಲ್ಲಿ ಸಿಲುಕಿ ಕರಡಿ ಸಂಕಟ ಪಡುತ್ತಿದ್ದು, ಕರಡಿ ಬಿಡಿಸಲು ಜನರೂ ಪರದಾಡುತ್ತಿದ್ದಾರೆ. ಜನರ ಕೂಗಾಟ ಕೇಳಿ ಕರಡಿ ಮತ್ತಷ್ಟು ಕಂಗಾಲಾಗಿದೆ.