ಸಿಲುಕಿ ಕರಡಿ ಪರದಾಟ

ಸಿಲುಕಿ ಕರಡಿ ಪರದಾಟ

ಚಿತ್ರದುರ್ಗ, ಅ. 14 : ಮೊಳಕಾಲ್ಮೂರು ಬಳಿ ಜಮೀನೊಂದರಲ್ಲಿ ತಂತಿ ಬೇಲಿಗೆ ಸಿಲುಕಿ ಕರಡಿಯೊಂದು ಪರದಾಡುತ್ತಿದೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಪಟ್ಟಣ ಹೊರವಲಯದ ರಾಯದುರ್ಗ ರಸ್ತೆಯ ಜಮೀನಿನಲ್ಲಿ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ತಂತಿ ಬೇಲಿ ದಾಟಲು ಹೋಗಿದ್ದ ವೇಳೆ ಜಮೀನಿನ ರಕ್ಷಣೆಗೆ ಹಾಕಿದ್ದ ತಂತಿಬೇಲಿಯಲ್ಲಿ ಸಿಲುಕಿ ಕರಡಿ ಸಂಕಟ ಪಡುತ್ತಿದ್ದು, ಕರಡಿ ಬಿಡಿಸಲು ಜನರೂ ಪರದಾಡುತ್ತಿದ್ದಾರೆ. ಜನರ ಕೂಗಾಟ ಕೇಳಿ ಕರಡಿ ಮತ್ತಷ್ಟು ಕಂಗಾಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos