ನಾಳೆ ಸಿಲಿಕಾನ್ ಸಿಟಿಗೆ ಸಚಿವ ರಾಜನಾಥ ಸಿಂಗ್

ನಾಳೆ ಸಿಲಿಕಾನ್ ಸಿಟಿಗೆ ಸಚಿವ ರಾಜನಾಥ ಸಿಂಗ್

ನವದೆಹಲಿ, ಸೆ. 18 : ಬೆಂಗಳೂರಿನ ಎಚ್ಎಎಲ್ ಏರ್ಪೋರ್ಟ್ನಿಂದ ತೇಜಸ್ ಹಗುರ ಯುದ್ಧ ವಿಮಾನದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹಾರಾಟ ನಡೆಸಲಿದ್ದಾರೆ.
ಪರೀಕ್ಷೆ ನಡೆಸಲಿರುವ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಡಿಆರ್ಡಿಒ ಬೆಂಗಳೂರಿನಲ್ಲಿ ಆಯೋಜಿಸಲಿರುವ ಕಾರ್ಯಕ್ರಮದಲ್ಲಿಯೂ ಸಿಂಗ್ ಭಾಗವಹಿಸಲಿದ್ದಾರೆ.
ಕಳೆದ ಶುಕ್ರವಾರ ಗೋವಾದಲ್ಲಿ ಯುದ್ಧ ವಿಮಾನ ವಾಹಕ ನೌಕೆಯಲ್ಲಿ ಹಗುರ ಯುದ್ಧ ವಿಮಾನವನ್ನು ಯಶಸ್ವಿಯಾಗಿ ಇಳಿಸುವ ಪರೀಕ್ಷೆ ನಡೆಸಲಾಗಿತ್ತು. ಐಎಎಫ್ 50 ಸಾವಿರ ಕೋಟಿ ರೂ. ವೆಚ್ಚದಲ್ಲಿ 83 ಯುದ್ಧ ವಿಮಾನ ಖರೀದಿಗೆ ಎಚ್ಎಎಲ್ ಜತೆಗೆ ಸಹಿ ಹಾಕಿತ್ತು.

ಫ್ರೆಶ್ ನ್ಯೂಸ್

Latest Posts

Featured Videos