ಸಿಲಿಕಾನ್ ಗೆ ಟ್ರಾಫಿಕ್ ಕಿರಿಕಿರಿ

ಸಿಲಿಕಾನ್ ಗೆ ಟ್ರಾಫಿಕ್ ಕಿರಿಕಿರಿ

ಬೆಂಗಳೂರು, ಡಿ. 23 : ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಇಂದು ಸೌಹಾರ್ದ ಸಭೆ ನಡೆಸಿದ್ದರಿಂದಾಗಿ ನಗರದೆಲ್ಲೆಡೆ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಯಿತು. ನಗರದ ಶಿವಾಜಿನಗರ, ಪುಲಕೇಶಿನಗರ, ಚಾಮರಾಜಪೇಟೆ ಸೇರಿ ದಂತೆ ವಿವಿಧೆಡೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಸಮಾವೇಶ ಸ್ಥಳಕ್ಕೆ ನಗರದ ವಿವಿಧ ಬಡಾವಣೆಗಳಿಂದ ಬೈಕ್ ರ್ಯಾಲಿಗಳಲ್ಲಿ ನೂರಾರು ಜನ ಆಗಮಿಸಿದ್ದರು. ಇದರಿಂದಾಗಿ ಬೆಂಗಳೂರಿನಾದ್ಯಂತ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎಲ್ಲೆಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಸಿಗ್ನಲ್ಗಳಲ್ಲಿ ಪ್ರತಿಭಟನಾಕಾರರಿಗೆ ದಾರಿ ಬಿಟ್ಟುಕೊಡಲಾಗುತ್ತಿತ್ತು. ನೂರಾರು ಮಂದಿ ರ್ಯಾಲಿ ನಡೆಸುತ್ತಿದ್ದರಿಂದ ಬದಲಿ ರಸ್ತೆಗಳಲ್ಲೂ ಕೂಡ ವಾಹನಗಳು ಸಂಚರಿಸಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos