ಸಿದ್ದು ವಿರುದ್ಧ ಜಾರಕಿಹೊಳಿ‌ ರಮೇಶ ವಾಗ್ದಾಳಿ

ಸಿದ್ದು ವಿರುದ್ಧ ಜಾರಕಿಹೊಳಿ‌ ರಮೇಶ ವಾಗ್ದಾಳಿ

ಬೆಳಗಾವಿ, ಸೆ. 28 : ಮೈತ್ರಿ ಸರ್ಕಾರ ಪತನಗೊಂಡಿರುವುದು ನಮ್ಮಿಂದಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಂದ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಇಂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ವ್ಯಕ್ತಿ ನಾಯಕನಾಗಿರುವರೆಗೆ ಕಾಂಗ್ರೆಸ್ಗೆ ಉಳಿಗಾಲವಿಲ್ಲ. ಕಾಂಗ್ರೆಸ್ ನಲ್ಲಿ 80 ಶಾಸಕರು ಆಯ್ಕೆಯಾಗಿದ್ದರು. ಇವರೇ ನಾಯಕರಾಗಿ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ 30 ಶಾಸಕರು ಆಯ್ಕೆ ಆಗುವುದು ಕಷ್ಟ ಎಂದು ಭವಿಷ್ಯ ನುಡಿದರು.
ನಾಯಕ ಎನಿಸಿಕೊಂಡವರು ತಮ್ಮ ವ್ಯಕ್ತಿತ್ವದಲ್ಲಿ ಖಚಿತತೆ ಹೊಂದಿರಬೇಕು. ಗೊಂದಲಕಾರಿ ವ್ಯಕ್ತಿತ್ವದ ಇಂತವರನ್ನು ಪಕ್ಷ ಹೇಗೆ ನಾಯಕ ಎಂದು ಒಪ್ಪಿಕೊಂಡಿತೋ ಎಂದು ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದರು.

ಸಿ

ಫ್ರೆಶ್ ನ್ಯೂಸ್

Latest Posts

Featured Videos