ಬೆಂಗಳೂರು, ಜೂನ್. 13: ಸಿದ್ದರಾಮಯ್ಯಗೆ ಟಾಂಗ್ ಕೊಡಲು ಜೆಡಿಎಸ್ ಹೊಸ ಪ್ಲಾನ್ ಮಾಡಿದ್ದು, ಸಿದ್ದರಾಮಯ್ಯಗೆ ಸೆಡ್ಡು ಹೊಡೆಯಲು ವಿಶ್ವನಾಥ್ರನ್ನ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮೊನ್ನೆ ಮೊನ್ನೆ ತಾನೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಮಾತನಾಡಿದ್ದ ವಿಶ್ವನಾಥ್, ಸಚಿವ ಸ್ಥಾನ ಕೊಟ್ರೆ ಯಾರು ಬೇಡ ಅಂತಾರೆ ಎಂದು ಹೇಳುವ ಮೂಲಕ, ಸಚಿವ ಸಂಪುಟ ಸೇರುವ ಹಂಬಲ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ವಿಶ್ವನಾಥ್ರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟವನ್ನು ಬಂಡೆಪ್ಪ ಕಾಶಂಪೂರ್ಗೆ ಕೊಡುವ ಸಾಧ್ಯತೆ ಇದ್ದು, ಆ ಸ್ಥಾನಕ್ಕೆ ವಿಶ್ವನಾಥ್ರನ್ನು ತರಬಹುದು.