ಭರ್ಜರಿ ಬಿರ್ಯಾನಿ ಸವಿದ ಕೈ ಮುಖಂಡರು

ಭರ್ಜರಿ ಬಿರ್ಯಾನಿ ಸವಿದ ಕೈ ಮುಖಂಡರು

 ಬೆಂಗಳೂರು, ಆ. 13 : ಟ್ವೀಟರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ರಾಜ್ಯ ಬಿಜೆಪಿ ಘಟಕ ಕುಟುಕಿದೆ. ಬಕ್ರೀದ್ ಹಬ್ಬದ ನಿಮಿತ್ತ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಕಾಂಗ್ರೆಸ್ ನಾಯಕನ್ನು ಆಹ್ವಾನಿಸಿದ್ದು, ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ಮುಖಂಡರು ಭರ್ಜರಿ ಬಿರ್ಯಾನಿ ಸವಿದಿದ್ದಾರೆ.   ಪಕ್ಷದ ವತಿಯಿಂದ ಆಯೋಜಿಸಿದ ಬಿರ್ಯಾನಿ ಪಾರ್ಟಿ ಹಿನ್ನಲೆ  ಬಿಜೆಪಿ ಟ್ವೀಟ್ ಮಾಡಿ,  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿರ್ಯಾನಿ ತಿನ್ನುವುದು ಮುಗಿದಿದ್ದರೆ, ಪ್ರವಾಹ ಪೀಡಿತ ಬಾದಮಿಗೆ ಭೇಟಿ ನೀಡಲಿ ಎಂದು ಟ್ವೀಟರ್ ನಲ್ಲಿ ಬಿಜೆಪಿ ಘಟಕ ಕಾಳೆದಿದೆ.

ಬಿರ್ಯಾನಿ ಪಾರ್ಟಿಯಲ್ಲಿ ಭಾಗವಹಿಸಲು ಸಮಯವಿದೆ.  ಪ್ರವಾಹ ಪೀಡಿತ ಬಾದಾಮಿ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಲು ಸಮಯವಿಲ್ಲವೇ ಎಂದು ಬಿಜೆಪಿ ಕಟುವಾಗಿ ಪ್ರಶ್ನಿಸಿದೆ.  ಬಿರ್ಯಾನಿ ತಿನ್ನುವುದು ಮುಗಿದಿದ್ದರೆ, ಕ್ಷೇತ್ರಕ್ಕೆ ಭೇಟಿ ನೀಡುವ ಪ್ರಯತ್ನ ಮಾಡಿ ನಿಮಗೆ ಮತ ನೀಡಿರುವ ಜನರ ಸಮಸ್ಯೆ ಆಲಿಸಿ ಎಂದು ಟ್ವಟ್‌ ಮಾಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos