ಸಿದ್ದು ಅಭಿಮಾನಿಗಳ ಜೈಕಾರ ದೇವೇಗೌಡರಿಗೆ ಕಿರಿಕಿರಿ…

ಸಿದ್ದು ಅಭಿಮಾನಿಗಳ ಜೈಕಾರ ದೇವೇಗೌಡರಿಗೆ ಕಿರಿಕಿರಿ…

ಕಡೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಭಾಷಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿಗಳು ಅಡ್ಡಿಪಡಿಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರವಾಗಿ ಕಡೂರು, ಬಾಣಾವಾರ, ಗಂಡಸಿ ಹೊಳೆನರಸೀಪುರ ಹಾಗೂ ಹಳ್ಳಿ ಮೈಸೂರಿನಲ್ಲಿ ಗುರು-ಶಿಷ್ಯರಾದ ದೇವೇಗೌಡ ಹಾಗೂ ಸಿದ್ದರಾಮಯ್ಯ ಜಂಟಿ ಪ್ರಚಾರಕಾರ್ಯ ಆರಂಭಿಸಿದರು. ಕಡೂರಿನಲ್ಲಿ ಚುನಾವಣಾ ಪ್ರಚಾರ ಮುಗಿದ ಬಳಿಕ, ಬಾಣಾವರದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ಮುಖಂಡರುಗಳ ಭಾಷಣದ ಬಳಿಕ ದೇವೇಗೌಡರು ಮಾತನಾಡಲು ಮುಂದಾದ ಸಂದರ್ಭದಲ್ಲಿ ಸಿದ್ದು ಅಭಿಮಾನಿಗಳ ಕೂಗಾಟ ಜೋರಾಗಿತ್ತು. ಇದರ ಮಧ್ಯೆಯೂ ದೇವೇಗೌಡರು ಮತ್ತೆ ಭಾಷಣ ಮುಂದುವರಿಸಲು ಮುಂದಾದರು. ಕುರುಬ ಸಮಾಜದ ಜನರು ಮಾತ್ರ ಮತ್ತೆ ಮತ್ತೆ ಸದ್ದು ಮಾಡಿ ಸಿದ್ದರಾಮಯ್ಯನವರಿಗೆ ಜೈಕಾರ ಹಾಕಿ ದೇವೇಗೌಡರಿಗೆ ಕಿರಿಕಿರಿ ಉಂಟುಮಾಡಿದರು. ಶಾಸಕ ಶಿವಲಿಂಗೇಗೌಡ ಸೇರಿದಂತೆ ಎಲ್ಲಾ ನಾಯಕರುಗಳು ಸುಮ್ಮನಾಗುವಂತೆ ಸೂಚಿಸಿದರೂ, ದೊಡ್ಡಗೌಡರು ಭಾಷಣ ನಿಲ್ಲಿಸುವವರೆಗೂ ಸಿದ್ದರಾಮಯ್ಯ ಪರ ಜೈಕಾರ ಕೂಗುವುದನ್ನು ನಿಲ್ಲಿಸಲಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos