ಸಿದ್ದರಾಮಯ್ಯ ರಾವಣಾಸುರ, ಸಂಸ್ಕಾರವಿಲ್ಲದ ವ್ಯಕ್ತಿ: ರಾಮುಲು

ಸಿದ್ದರಾಮಯ್ಯ ರಾವಣಾಸುರ, ಸಂಸ್ಕಾರವಿಲ್ಲದ ವ್ಯಕ್ತಿ: ರಾಮುಲು

ಚಿತ್ರದುರ್ಗ: ಮಾಜಿ ಸಿಎಂ ಸಿದ್ದರಾಮಯ್ಯ ರಾವಣಾಸುರ ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ.

ಇಂದು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾವಣಾಸುರನ ಎಲ್ಲಾ ಗುಣಗಳು ಸಿದ್ದರಾಮಯ್ಯ ಬಳಿ ಇವೆ. ಸಿದ್ದರಾಮಯ್ಯ ಓರ್ವ ಸಂಸ್ಕಾರವಿಲ್ಲದ ವ್ಯಕ್ತಿ ಎಂದು ಟೀಕಿಸಿದರು.

ಹೆಣ್ಣು ಮಕ್ಕಳ ಬಗ್ಗೆ ಗೌರವದಿಂದ ಮಾತನಾಡುತ್ತಾನಷ್ಟೇ. ಆದರೆ ಹತ್ತಿರದಿಂದ ನೋಡಿದವರಿಗೆ ಅವರ ಗುಣ ಗೊತ್ತಿದೆ.ಆತ ದೊಡ್ಡ ಮನುಷ್ಯನಲ್ಲ ಎಂದು ಏಕವಚನದಲ್ಲೇ ಮಾತನಾಡಿದ್ದಾರೆ.

ಲೋಕಸಭೆ ಚುನಾವಣಾ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲ ಏರ್ಪಟ್ಟಿದೆ. ಚುನಾವಣೆಗೆ ಹಣ ಕ್ರೂಢೀಕರಿಸಲು ಕಚ್ಚಾಟ, ಲಂಚ, ಕಮಿಷನ್ ಹಣಕ್ಕಾಗಿ ಕಾದಾಟ ನಡೆಯುತ್ತಿದ್ದು, ವರ್ಗಾವಣೆಯ ದಂಧೆ ಹೆಚ್ ಡಿ ಕುಮಾರಸ್ವಾಮಿ ಕುಟುಂಬದ ಹಿಡಿತದಲ್ಲಿದೆ ಎಂದು ಆರೋಪಿಸಿದರು.

ಶಾಸಕರು ಅಸಮಾಧಾನಗೊಂಡಿದ್ದು ಯಾವ ಸಮ್ಮಿಶ್ರ ಸರ್ಕಾರ ಕೊನೆ ಕ್ಷಣಗಳನ್ನು ನೋಡುತ್ತಿದೆ ಎಂದರು. ಈ ಸಮ್ಮಿಶ್ರ ಸರ್ಕಾರಕ್ಕೆ ತತ್ವ ಸಿದ್ಧಾಂತ ಗೊತ್ತು ಗುರಿ.. ಯಾವುದೂ ಇಲ್ಲ ಎಂದರು. ಇದೇ ಸಂದರ್ಭದಲ್ಲಿ ಅವರು ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos