ಪ್ರತ್ಯೇಕ ಧರ್ಮ; ನಿಜಕ್ಕೂ ವಿವಾದ ಮಾಡಿದ್ಯಾರು; ಸಿದ್ದು ಹೇಳಿದ್ದೇನು ?

  • In State
  • December 8, 2018
  • 236 Views
ಪ್ರತ್ಯೇಕ ಧರ್ಮ; ನಿಜಕ್ಕೂ ವಿವಾದ ಮಾಡಿದ್ಯಾರು; ಸಿದ್ದು ಹೇಳಿದ್ದೇನು ?

ಚಾಮರಾಜನಗರ: ಇನ್ಮುಂದೆ ನಾನು ಧರ್ಮದ ಬಗ್ಗೆ ಮಾತನಾಡಲ್ಲ. ಮಾತನಾಡಿದ್ರೆ ವಿವಾದವಾಗುತ್ತೆ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ಮೇಲೆ ಅಪಪ್ರಚಾರ ಮಾಡಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶನಿವಾರ ಚಾಮರಾಜನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಗುರು ಪರಂಪರೆಯವರು ಬಂದು ವೀರಶೈವ ಮಾಡಿ ಅಂತ ಹೇಳಿದರು, ನಂತರ ವಿರಕ್ತ ಪರಂಪರೆಯವರು ಬಂದು ಬೇಡ, ಬೇಡ ಲಿಂಗಾಯತ ಧರ್ಮ ಮಾಡಿ ಅಂತ ಒತ್ತಾಯಿಸಿದರು. ಹೀಗೆ ಗೊಂದಲಕ್ಕೀಡಾಗಿ ಮೈನಾರಿಟಿ ಕಮಿಷನ್ ಗೆ ಶಿಫಾರಸು ಮಾಡಿ ವರದಿ ನೀಡಲು ಹೇಳಿದ್ದೆ. ಇದು ನನ್ನ ತಪ್ಪಾ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಶಾಮನೂರು ಶಿವಶಿಂಕರಪ್ಪ, ಎಂಬಿ ಪಾಟೀಲ್, ಶಾಮನೂರು ಮಗ ಮಲ್ಲಿಕಾರ್ಜುನ, ಖಂಡ್ರೆ, ಕುಲಕರ್ಣಿ ಎಲ್ಲರೂ ಇದ್ದರೂ. ಆದರೆ ಇವ್ರು, ಇವ್ರೆ ಮಾಡಿಕೊಂಡಿದ್ದಕ್ಕೆ ನನ್ನ ವಿರುದ್ಧ ಅಪಪ್ರಚಾರ ಮಾಡಿದರು ಎಂದು ನೇರವಾಗಿ ಆರೋಪಿಸಿದರು.

ಹೀಗಾಗಿ ನಾನೀಗ ಧರ್ಮದ ವಿಚಾರ ಮಾತನಾಡುವಾಗ ತುಂಬಾ ಜಾಗ್ರತೆ ವಹಿಸುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos