ಸಿದ್ಧಗಂಗಾ ಶ್ರೀಗಳಿಗೆ ಪದ್ಮಶ್ರೀ ದೊರಕಿಲ್ಲದರ ಕುರಿತು ಬಿಎಸ್ವೈತ ಉತ್ತರಿಸಬೇಕು: ಎಚ್ಡಿಕೆ

ಸಿದ್ಧಗಂಗಾ ಶ್ರೀಗಳಿಗೆ ಪದ್ಮಶ್ರೀ ದೊರಕಿಲ್ಲದರ ಕುರಿತು ಬಿಎಸ್ವೈತ ಉತ್ತರಿಸಬೇಕು: ಎಚ್ಡಿಕೆ

ಬೆಂಗಳೂರು:
ಸಿದ್ದಗಂಗಾ ಶ್ರೀಗಳಿಗೆ ‘ಭಾರತ ರತ್ನ’ಪ್ರಶಸ್ತಿ
ಸಿಗದ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿ
ಈ ಬಗ್ಗೆ ಯಡಿಯೂರಪ್ಪ ಅವರೇ ಉತ್ತರ ನೀಡಬೇಕು.
ಅವರು ಯಾಕೆ ಇದೂವರೆಗೂ ಏನೂ
ಮಾತನಾಡುತ್ತಿಲ್ಲ ಎಂಬುದು ನನಗೆ ಗೊತ್ತಿಲ್ಲ
ಎಂದು ಹೇಳಿದ್ದಾರೆ.

ರೈಲ್ವೆ
ನಿಲ್ದಾಣ ಬಳಿ ಇರುವ ಸಂಗೊಳ್ಳಿ
ರಾಯಣ್ಣ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಇದೇ ವೇಳೆ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಾವು ಆಪರೇಷನ್ ಕಮಲ ಮಾಡುತ್ತಿಲ್ಲ ಅಂತ ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರ ಕುದುರೆ ವ್ಯಾಪಾರ ಇನ್ನೂ ನಿಂತಿಲ್ಲ. ತೆರೆಮರೆ ಪ್ರಯತ್ನ ನಡೆಯುತ್ತಲೇ ಇದೆ ಎಂದು ಆರೋಪಿದ್ದಾರೆ.

ಸಂಗೊಳ್ಳಿ ರಾಯಣ್ಣ ಜಯಂತಿ ಮತ್ತು ಹುತಾತ್ಮ ದಿನವನ್ನು ಸರಕಾರದ ಉತ್ಸವವನ್ನಾಗಿ ಆಚರಿಸುವಂತೆ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸಿಎಂಗೆ ಮನವಿ ಮಾಡಿದರು. ಆಗ ಮೊದಲು ಸಮಾನ ಮನಸ್ಕರ ಸಭೆ ಕರೆಯುತ್ತೇನೆ. ಬಳಿಕ ಅಂತಿಮ ನರ‍್ಧಾರ ತೆಗೆದುಕೊಳ್ಳಲಾಗುವುದು ಅಂತಾ ಸಿಎಂ ಭರವಸೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos