ಬೆಂಗಳೂರು, ಆ. 30: ಧಾರಾಕಾರ ಮಳೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳು ನೀರನ್ನು ಹೊರ ತಳ್ಳಲು ಪರದಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಗುರುವಾರ ರಾತ್ರಿ ದೇವನಹಳ್ಳಿಯಲ್ಲಿ ಸುರಿದ ಮಳೆಯಿಂದಾಗಿ ವಿಮಾನ ನಿಲ್ದಾಣದ ದೇಶೀಯ ನಿರ್ಗಮನ ಗೇಟ್ ಬಳಿ ಸಿಲಿಂಗ್ ನಿಂದ ಮಳೆ ನೀರು ಒಳಗೆ ಸುರಿಯುತ್ತಿದ್ದರಿಂದ ಸಿಬ್ಬಂದಿಗಳು ಪ್ರಯಾಣಿಕರನ್ನು ನಿಲ್ಲಿಸಿ ನೀರನ್ನು ಹೊರಗೆ ತಳ್ಳುತ್ತಿದ್ದಾರೆ.