ಧಾರವಾಡ, ಜ. 22: ತಾಲೂಕಿನ ಚಂದನಮಟ್ಟಿ ಗ್ರಾಮ ವಿಠ್ಠಲ ಮಂದಿರದಲ್ಲಿ ಶ್ರೀ ರಾಮ ಸೇನೆ ವತಿಯಿಂದ ಜಾಗೃತಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಗ್ರಾಮದ ಎಲ್ಲ ಜನರಿಗೆ ಶ್ರೀ ರಾಮ ಸೇನೆ ಕಾರ್ಯಕರ್ತರು ಹಿಂದೂ ವಿಚಾರಧಾರೆಗಳ ಮೇಲೆ ಆಗುತ್ತಿರುವ ದಬ್ಬಾಳಿಕೆ ಹಾಗೂ ಹಿಂದೂತ್ವದ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಇದೇ ತಿಂಗಳ 23ರಂದು ಶ್ರೀ ರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರವರ ಹುಟ್ಟು ಹಬ್ಬದ ಕಾರ್ಯಕ್ರಮದ ಕುರಿತು ಚರ್ಚಿಸಿ ವಿವಿಧ ಚಟುವಟಿಕೆಗಳ ಬಗ್ಗೆ ನಿರ್ಣಯ ಕೈಗೋಳಲಾಯಿತು.
ಜಾಗೃತಿ ಆಂದೋಲನ ಅಭಿಯಾನದಲ್ಲಿ ಶ್ರೀ ರಾಮ ಸೇನೆ ಧಾರವಾಡ ನಗರ ಪ್ರಮುಖ ವಿಶ್ವಾಸ, ಶ್ರೀ ರಾಮ ಸೇನೆ ಚಂದನಮಟ್ಟಿ ಗ್ರಾಮ ಪ್ರಮುಖ ಸುರೇಶ ಸಿಂಧೆ ಸೇರಿದಂತೆ ಶ್ರೀ ರಾಮ ಸೇನೆ ಕಾರ್ಯಕರ್ತರು ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.