ಚಿಕ್ಕಮಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಕೆಪಿಸಿಸಿ ಕಾರ್ಯದರ್ಶಿ ಎ.ಎಲ್. ಮೂರ್ತಿ ವಅರು, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಲಕ್ಕವಳಿ ಡ್ಯಾಮಿಗೆ ವರ್ಷಕ್ಕೊಮ್ಮೆ ಬರುವ ರಿವರ್ ಟನ್ ಬರ್ಡ್ ಇದ್ದಂತೆ ಎಂದು ವ್ಯಂಗ್ಯವಾಡಿದ್ದಾರೆ.
ಭದ್ರಾ ಜಲಾಶಯಕ್ಕೆ ವರ್ಷಕೊಮ್ಮೆ ರಿವರ್ ಟನ್ ಎಂಬ ಪಕ್ಷಿ ಬಂದು ಇಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಪರಿವಾರದೊಂದಿಗೆ ಮತ್ತೆ ಹೋಗುತ್ತದೆ. ಅದೇ ರೀತಿ ಶೋಭಾ ಕರಂದ್ಲಾಜೆಯವರು ವರ್ಷಕ್ಕೊಮ್ಮೆ ಜಿಲ್ಲೆಗೆ ಬರುತ್ತಾರೆ ಎಂದು ಟೀಕಿಸಿದರು.
ಮೈತ್ರಿ ಪಕ್ಷದ ಅಭ್ಯರ್ಥಿಯಾದ ಪ್ರಮೋದ್ ಮಧ್ವರಾಜ್ ಅವರು ಜಯಪ್ರಕಾಶ್ ಹೆಗಡೆಗಿಂತ ಹೆಚ್ಚು ನಡೆ, ನುಡಿ, ಸಂಸ್ಕಾರ ಇರುವ ಅಭ್ಯರ್ಥಿ. ಜಿಲ್ಲೆಯ ಜನ ಬೆಂಬಲಿಸಿದರೆ ಕೇಂದ್ರದಲ್ಲಿ ಪ್ರಭಾವ ಬೀರಿ ಜಿಲ್ಲೆಗೆ ಪೂರಕವಾದ ಯೋಜನೆ ತರಲು ಅನುಕೂಲವಾಗಲಿದೆ ಎಂದು ಹೇಳಿದರು.