ಷಡ್ಯಂತ್ರ ಮಾಡಿದವರಿಗೆ ಟಿಕೆಟ್ ಮಿಸ್: ಶೋಭಾ ಕರಂದ್ಲಾಜೆ ಟಾಂಗ್

ಷಡ್ಯಂತ್ರ ಮಾಡಿದವರಿಗೆ ಟಿಕೆಟ್ ಮಿಸ್: ಶೋಭಾ ಕರಂದ್ಲಾಜೆ ಟಾಂಗ್

ಬೆಂಗಳೂರು: ಲೋಕಸಭೆ ಚುನಾವಣೆಗೆ ತಮಗೆ ಟಿಕೆಟ್ ಸಿಕ್ಕ ಬೆನ್ನಲ್ಲೆ ಇಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನ ಭೇಟಿಯಾಗಿ ಧನ್ಯವಾದ ಅರ್ಪಿಸಿದ ಬಳಿಕ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರಿನಲ್ಲಿ ಅಭಿವೃದ್ದಿ ಕೆಲಸ ಮಾಡಿದ್ದೇನೆ.

ಹೌದು, ಆದರೂ ನನ್ನ ವಿರುದ್ದ ಗೋಬ್ಯಾಕ್ ಅಭಿಯಾನ ಮಾಡಿದರು.  ಷಡ್ಯಂತ್ರ ಮಾಡಿದವರಿಗೆ ಟಿಕೆಟ್ ಮಿಸ್ ಆಗಿದೆ. ಪಕ್ಷಕ್ಕೆ ಅವಮಾನ ಮಾಡಿದವರಿಗೆ ಮಣೆ ಹಾಕಿಲ್ಲ. ಇನ್ನಾದರೂ ವಿರೋಧ ಮಾಡುವವರು ಪಾಠ ಕಲಿಯಬೇಕು ಎಂದರು.

ನನ್ನ ಪರವಾಗಿ  ನನ್ನ ನಾಯಕರು ನಿಂತಿದ್ದಾರೆ. ನನ್ನ ನಾಯಕತ್ವ ಕೆಲಸವನ್ನ ಪಕ್ಷ ಗುರುತಿಸಿದೆ. ನನ್ನ ನಾಯಕರ ನಿರ್ಧಾರಕ್ಕೆ ನಾನು ಬದ್ಧ. ಈ ಹಿಂದೆ ಯಶವಂತಪುರದಲ್ಲಿ ಮಾಡಿದ್ದೆ ಈಗ ನನ್ನನ್ನು ಬೆಂಗಳೂರಿಗೆ ಕಳಿಸಿದ್ದಾರೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos