ದತ್ತ ಜಯಂತಿ, ಶೋಭಾ ಯಾತ್ರೆಗೆ ಸಜ್ಜು!

ದತ್ತ ಜಯಂತಿ, ಶೋಭಾ ಯಾತ್ರೆಗೆ ಸಜ್ಜು!

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿದ್ದು ದತ್ತ ಜಯಂತಿ ಹಾಗೂ ಶೋಭಾ ಯಾತ್ರೆ ನಡೆಸಲಾಗುತ್ತಿದೆ.  ಬಾಬು ಬುಡನ್ ಸ್ವಾಮಿ ದರ್ಗಾ ಸುತ್ತಮುತ್ತ ಬಿಗಿ ಭದ್ರತೆ ಯನ್ನು ಕಲ್ಪಿಸಲಾಗಿದೆ. ಬಜರಂಗದಳ ವಿ ಎಚ್ ಪಿ ನೇತತ್ವದಲ್ಲಿ ಶೋಭಾ ಯಾತ್ರೆ ನಡೆಯುತ್ತೆ. ಶ್ರೀರಾಮ ಸೇನೆಯಿಂದಲೂ ದತ್ತ ಜಯಂತಿ ಆಚರಿಸಲಾಗುತ್ತಿದೆ. ಇನ್ನು ದರ್ಗಾದ 200 ಮೀಟರ್ ವ್ಯಾಪ್ತಿಯಲ್ಲಿ ಪ್ರವೇಶ ನಿರ್ಬಂಧ ಮಾಡಲಾಗಿದೆ. ಜಿಲ್ಲೆಯಾದ್ಯಂತ 4 ಸಾವಿರ ಪೋಲಿಸ್ ನಿಯೋಜನೆ ಮಾಡಲಾಗಿದೆ. ಸೆಕ್ಷನ್ 144 ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ದತ್ತ ಜಯಂತಿ ಹಾಗೂ ಶೋಭಾ ಯಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos