ಬೆಂಗಳೂರು, ಅ. 28 : ನಗರದಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಎಸ್ಎಸ್ಆರ್ ಬಡಾವಣೆಯ ನಿವಾಸಿಗಳು ದೀಪಾವಳಿ ಬದಲು ಶಿವರಾತ್ರಿ ಜಾಗರಣೆ ಆಚರಿಸುವಂತಾಯಿತು.
ಪ್ರತಿ ಬಾರಿ ಮಳೆ ಸುರಿದಾಗಲೂ ಎಚ್ಎಸ್ಆರ್ ಬಡಾವಣೆಯ ಎರಡು ಮತ್ತು ಮೂರನೆ ಸೆಕ್ಟರ್ಗಳಲ್ಲಿ ನೀರು ತುಂಬಿಕೊಳ್ಳುವುದು ಸರ್ವೇ ಸಾಮಾನ್ಯ. ಪ್ರತಿ ಬಾರಿ ಮಳೆಯಾದಾಗಲೂ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರೂ ಇದುವರೆಗೂ ಅದು ಸಾಧ್ಯವಾಗಿಲ್ಲ.
ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಎರಡು ಮತ್ತು ಮೂರನೆ ಸೆಕ್ಟರ್ಗಳ ರಸ್ತೆಗಳಲ್ಲಿ ಆಳುದ್ದ ನೀರು ನಿಂತಿದ್ದಲ್ಲದೆ ಮನೆಗಳಿಗೂ ನೀರು ನುಗ್ಗಿತು. ಮನೆಗಳಿಗೆ ನೀರು ನುಗ್ಗಿದ್ದರಿಂದ ದೀಪಾವಳಿ ಆಚರಿಸುವ ಸಂಭ್ರಮದಲ್ಲಿದ್ದ ಸ್ಥಳೀಯರು ಶಿವರಾತ್ರಿ ಜಾಗರಣೆ ಆಚರಿಸುವಂತಾಯಿತು.