ಕುತೂಹಲ ಕೆರಳಿಸಿದ ಶಿವರಾಮ್ ಹೆಬ್ಬಾರ್ ಸಿಎಂ ಭೇಟಿ!

ಕುತೂಹಲ ಕೆರಳಿಸಿದ ಶಿವರಾಮ್ ಹೆಬ್ಬಾರ್ ಸಿಎಂ ಭೇಟಿ!

ಬೆಂಗಳೂರು: ಆಪರೆಷನ್ ಹಸ್ತ ಆರೋಪ ಜೋರಾದ ಹಿನ್ನಲೆಯಲ್ಲಿ, ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಶುಕ್ರವಾರ ರಾತ್ರಿ ಸಿ.ಎಂ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ರಾಜ್ಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಹೆಬ್ಬಾರ್ ಸರಿ ಸುಮಾರು ಎರಡು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ಗೊಂದಲಕ್ಕೆ ಎಡೆ ಮಾಡಿ ಕೊಟ್ಟಿದೆ.
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಚದ ಆಪರೇಷನ್ ಗಾಳಕ್ಕೆ ಸಿಲುಕಿ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರಬಹದು ಎಂಬ ಸುದ್ದಿಗಳು ಎದ್ದಿದ್ದವು. ಈ ವಿಷಯದನ್ವಯ ಶಿವರಾಮ್ ಹೆಬ್ಬಾರ್ ಗುರುವಾರ ವರದಿಗಾರರ ಜೊತೆ ಮಾತನಾಡಿ ನಾನು ಯಾವುದೇ ಕಾರಣಕ್ಕೂ ಕಾಂಗ್ರೇಸ್ ಪಕ್ಷಕ್ಕೆ ಸೇರುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ಹಾಗೂ ನಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಚರ್ಚಿಸಿದ್ದೇನೆಯೇ ಹೊರತು ಬೇರೆ ಏನೂ ಇಲ್ಲ ಎಂದು ಹೇಳಿದರು.
ವರದಿಗಾರ
ಎ.ಚಿದಾನಂದ,ವಿಜಯನಗರ.

ಫ್ರೆಶ್ ನ್ಯೂಸ್

Latest Posts

Featured Videos