ಚಿತ್ರದುರ್ಗ, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಕೂಡ್ಲಗಿಯ ಶಾಸಕರೊಬ್ಬರ ಬಾಡಿಗೆ ಮನೆಯ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಮನೆಯನ್ನೆಲ್ಲಾ ಜಾಲಾಡಿ ನಂತರ ಕೈಗೆ ಸಿಕ್ಕಿದ 5 ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾರೆ.
ಚಿತ್ರದುರ್ಗಕ್ಕೆ ಆಗಾಗ್ಗೆ ಬಂದು-ಹೋಗುತ್ತಿದ್ದರಿಂದ ಕೂಡ್ಲಗಿ ಶಾಸಕ ಗೋಪಾಲಕೃಷ್ಣ ಅವರು, ಹಲವು ವರ್ಷಗಳ ಹಿಂದೆ ದವಳಗಿರಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ನಗರಕ್ಕೆ ಬಂದಾಗ ಈ ಮನೆಯಲ್ಲೇ ತಂಗುತ್ತಿದ್ದರು. ಉಳಿದಂತೆ ಈ ಮನೆ ಬೀಗ ಹಾಕಲಾಗುತ್ತಿತ್ತು.
ಇದೀಗ ಚುನಾವಣೆ ಸಮಯವಾಗಿರುವುದರಿಂದ ಶಾಸಕರು ಹಣ ಇಟ್ಟಿರಬಹುದೆಂದು ಭಾವಿಸಿದ್ದ ಕಳ್ಳಹರು ರಾತ್ರಿ ಮನೆ ಬಾಗಿಲು ಒಡೆದು ಒಳನುಗ್ಗಿ ಮನೆಯನ್ನೆಲ್ಲಾ ಜಾಲಾಡಿದ್ದಾರೆ. ಆದರೆ ಕಳ್ಳರಿಗೆ ಹೆಚ್ಚಿನದೇನೂ ಸಿಕ್ಕಿಲ್ಲ ನಂತರ ಕೈಗೆ ಸಿಕ್ಕಿದ 5 ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾರೆ.