ಸರ್ಪದೋಷದ ನೆಪ ಹೇಳಿ ಕಾಮಕೇಳಿಗೆ ಯತ್ನ

ಸರ್ಪದೋಷದ ನೆಪ ಹೇಳಿ ಕಾಮಕೇಳಿಗೆ ಯತ್ನ

ಬೆಂಗಳೂರು, ಸೆ. 12: ಸರ್ಪದೋಷ ನಿವಾರಣೆ ಮಾಡಿಸುವುದಾಗಿ ತಂದೆ ಮಕ್ಕಳಿಬ್ಬರು ಯುವತಿಯೊಂದಿಗೆ ಸರಸಕ್ಕೆ ಯತ್ನಿಸಿ ವಿಫಲವಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಅಪ್ಪ ಗಣೇಶ ಮಗ ಮಣಿಕಂಠ  ಇಬ್ಬರೂ ಯುವತಿಯನ್ನು ವಂಚಿಸಲು ಯತ್ನಿಸಿ ವಿಫಲರಾಗಿದ್ದಾರೆ. ಯುವತಿ ಬಾಣಸವಾಡಿಯ ಖಾಸಗಿ ಕಂಪನಿಯೊಂದರಲ್ಲಿ ಹೆಚ್.ಆರ್ ಆಗಿ ಕೆಲಸ ಮಾಡುತ್ತಿದ್ದಳು.

ನಿನಗೆ ಸರ್ಪದೋಷ ಇದೆ ನೀನು ಮದುವೆ ಆದರೂ ನಿನ್ನೊಂದಿಗೆ ಯಾರೂ ಸಂಸಾರ ಮಾಡುವುದಿಲ್ಲ. ಹಾಗಾಗಿ ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಸರ್ಪದೋಷ ಪೂಜೆ ಮಾಡಿಸಿ ನಿವಾರಣೆ ಮಾಡಿಸಿಕೊಂಡು, ನಂತರ ನನ್ನ ಹಾಗೂ ನನ್ನ ಮಗನ ಆಸೆಯನ್ನು ಪೂರೈಸಿದರೆ ಮಾತ್ರ ನಿನ್ನ ಮುಂದಿನ ಭವಿಷ್ಯ ಹಾಗೂ ದಾಂಪತ್ಯ ಜೀವನ ಸುಖಮಯವಾಗಿರುತ್ತದೆಂದು ಇಲ್ಲಸಲ್ಲದ ಸಬೂಬು ಹೇಳಿ ಕಾಮಕೇಳಿಗೆ ಯತ್ನಿಸಿದ್ದಾನೆ ವಂಚಕ ಗಣೇಶ್.

ಬೈಕ್‌ ನಲ್ಲಿ ಕೂರಿಸಿಕೊಂಡು ಕುಕ್ಕೆಗೆ ಕರೆದೊಯ್ದು ವಂಚಿಸಲೆತ್ನಿಸಿದ್ದಾರೆ. ಅಪ್ಪ ಮಗ. ವಂಚನೆಯ ಸುಳಿವರಿತ ಯುವತಿ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಕಾಮಿಸ್ವಾಮಿ ಗಣೇಶ್ ಮತ್ತು ಮಗ ಮಣಿಕಂಠನ ವಿರುದ್ಧ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos